ದೆಹಲಿ ತಡೆರಹಿತ ರೈಲಿಗೆ ಹಸಿರು ನಿಶಾನೆ

ಯಶವಂತಪುರ-ದೆಹಲಿ ಸರಾಯ್ ರೊಹಿಲ್ಲಾ ನಿಲ್ದಾಣಗಳ ಮಧ್ಯೆ ತುರಂತೊ ಎಕ್ಸ್ಪ್ರೆಸ್ ರೈಲು ವಾರಕ್ಕೆ ಒಂದು ಬಾರಿ ಸಂಚರಿಸಲಿದೆ. ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ವಾರಕ್ಕೆ ಎರಡು ಅಥವಾ ಮೂರು ಬಾರಿ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಯಶವಂತಪುರದಿಂದ ಪ್ರತಿ ಶನಿವಾರ ರಾತ್ರಿ 11.40ಕ್ಕೆ ಹೊರಡುವ ರೈಲು, ದೆಹಲಿಯ ಸರಾಯ್ ರೊಹಿಲ್ಲಾ ನಿಲ್ದಾವನ್ನು ಸೋಮವಾರ ಬೆಳಗ್ಗೆ 6.50ಕ್ಕೆ ತಲುಪಲಿದೆ. ಪ್ರಯಾಣದ ಅವಧಿ ಕೇವಲ 31ಗಂಟೆ. ಮಾರ್ಗ ಮಧ್ಯೆ ರೈಲು ಎಲ್ಲೂ ನಿಲ್ಲುವುದಿಲ್ಲ. ರೈಲಿನ ಎಲ್ಲ ಬೀಗಿಗಳಿಗೆ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ.
ದಿಲ್ಲಿಯಿಂದ ಬೆಂಗಳೂರಿನತ್ತ: ಇನ್ನು, ದೆಹಲಿಯ ಸರಾಯ್ ರೊಹಿಲ್ಲಾ ನಿಲ್ದಾಣದಿಂದ ಬುಧವಾರ ರಾತ್ರಿ 11 ಗಂಟೆಗೆ ಹೊರಡುವ ರೈಲು ಯಶವಂತಪುರಕ್ಕೆ ಶುಕ್ರವಾರ ಬೆಳಗ್ಗೆ 7 ಗಂಟೆಗೆ ತಲುಪಲಿದೆ. ಬೆಂಗಳೂರು- ದೆಹಲಿ ಮಧ್ಯೆ ಸಂಚರಿಸುತ್ತಿರುವ ಇತರೆ ರೈಲುಗಳೆಂದರೆ ರಾಜಧಾನಿ ಎಕ್ಸೆಪ್ರೆಸ್ (ಪ್ರಯಾಣದ ಅವಧಿ 34 ಗಂಟೆ) , ಕರ್ನಾಟಕ ಎಕ್ಸ್ಪ್ರೆಸ್ (ಪ್ರಯಾಣದ ಅವಧಿ 40 ಗಂಟೆ) ಮತ್ತು ಸಂಪರ್ಕ ಕ್ರಾಂತಿ (ಪ್ರಯಾಣದ ಅವಧಿ 44 ಗಂಟೆ).
ದರ ಪಟ್ಟಿ:
1 ಎಸಿ ತುರಂತೊ ಎಕ್ಸ್ಪ್ರೆಸ್ 5,012 ರು. ರಾಜಧಾನಿ ಎಕ್ಸ್ಪ್ರೆಸ್ 4,555 ರು.
2 ಎಸಿ ತುರಂತೊ ಎಕ್ಸ್ಪ್ರೆಸ್ 2,951 ರು. ರಾಜಧಾನಿ ಎಕ್ಸ್ಪ್ರೆಸ್ 2,725 ರು.











Click it and Unblock the Notifications