ದೇಹ ಸುಖ ಪಡೆದು 300ಜನಕ್ಕೆ ಏಡ್ಸ್ ಹರಡಿದ ಮಾರಿ

ಅಭಿಸಾರಿಕಾ (ಹೆಸರು ಬದಲಿಸಲಾಗಿದೆ) ಎಂಬಾಕೆ 2001ರಲ್ಲಿ ವಿವಾಹವಾಗಿದ್ದು , ಆಕೆಗೆ ಗಂಡನ ಜೊತೆ ದೇಹ ಸಂಪರ್ಕದಿಂದ 2005ರಲ್ಲಿ ಏಡ್ಸ್ ರೋಗ ತಗುಲಿತ್ತು. ಅಲ್ಲಿಂದ ಮುಂದಕ್ಕೆ ಆಕೆ ಮಾನಸಿಕವಾಗಿ ವೇದನೆಗೊಳಗಾಗಿರುವುದಲ್ಲದೆ ಗಂಡನಿಂದ ಬೇರೆಯಾಗಿದ್ದಳು. ಇದೇ ವೇಳೆ ಅಭಿಸಾರಿಕಾ, ತನಗೆ ಗಂಡಸೊಬ್ಬನಿಂದ ಅಂಟಿದಂತಹ ಜೀವ ಹಿಂಡುವ ರೋಗವನ್ನು ತನ್ನಲ್ಲೇ ಉಳಿಸಿಕೊಳ್ಳಲು ಇಷ್ಟಪಡದೆ, ತನಗೆ ಮೋಸ ಮಾಡಿದ ಪುರುಷ ವರ್ಗಕ್ಕೆ 'ಪ್ರಸಾದ" ರೂಪವಾಗಿ ಹಿಂದಿರುಗಿಸಲು ತೀರ್ಮಾನಿಸಿದ್ದಾಳೆ. ಹೀಗೆ ಆಕೆ ಈಗಾಗಲೇ ತನೊಂದಿಗೆ ಮಲಗಿದ ನೂರಾರು ಮಂದಿಗೆ ಏಡ್ಸ್ ದಾನ ಮಾಡಿದ್ದಾಳೆ !
ಅಭಿಸಾರಿಕಾಳೊಂದಿಗೆ ಮಲಗಿರುವವರಲ್ಲಿ ತನ್ನ ಕೆಲಸಗಾರರು, ಸಂಬಂಧಿಗಳು, ಗೆಳೆಯರು, ಲಿಫ್ಮೆನ್, ಟ್ಯಾಕ್ಸಿ ಡ್ರೈವರ್ಗಳು ಮತ್ತು ವಿದ್ಯಾರ್ಥಿಗಳು ಒಳಗೊಂಡಿದ್ದು, ಇವರಲ್ಲಿ ಹೆಚ್ಚಿನವರು ಈಗ ಏಡ್ಸ್ ರೋಗ ಬಾಧಿತರಾಗಿದ್ದಾರೆ. ತನ್ನೊಂದಿಗೆ ಲೈಂಗಿಕ ಸುಖ ಅನುಭವಿಸುವ ಪುರುಷರು ಕಾಂಡೋಮ್ ಧರಿಸಲು
ಅಭಿಸಾರಿಕಾ ನಿರಾಕರಿಸುತ್ತಿದಳು. ರೋಗದ ಬಗ್ಗೆ ತಿಳಿಯದ ಮಂದಿ, ಆಕೆಯ ಸೌಂದರ್ಯಕ್ಕೆ ಮರುಳಾಗಿ ಆಕೆ ಹೇಳಿದಂತೆ ನಡೆದುಕೊಂಡು, ಸುಖ ಅನುಭವಿಸಿ ಕೊನೆಗಾಗುವಾಗ ಗೊತ್ತಿಲ್ಲದೆಯೇ ಏಡ್ಸ್ಗೆ ತುತ್ತಾಗಿದ್ದಾರೆ.
ಅಭಿಸಾರಿಕಾ ರೋಗ ಹರಡಿಸುವ ಕಾರಣದಿಂದಲೇ ತನ್ನ ಗಿರಾಕಿಗಳನ್ನು ಕಾಂಡೋಮ್ ಮುಕ್ತರನ್ನಾಗಿಸುವಂತಹ ಉಪಾಯ ಹೂಡಿದ್ದಾಳೆ. 28 ರ ಹರೆಯದ ಅಭಿಸಾರಿಕಾಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ಯುಎನ್ಐಎಸ್ಒಎನ್ ಮೆಡಿಕೇರ್ ಆಂಡ್ ರೀಸರ್ಚ್ ಸೆಂಟರಿನ ಎಂಡಿ ಡಾ ಈಶ್ವರ್ ಗಿಲಾಡ, "ಅಭಿಸಾರಿಕಾ ನನ್ನ ಪೇಶೆಂಟ್. ಆಕೆ ಏಡ್ಸ್ ರೋಗಿಯಾಗಿರುವುದರಿಂದ ಕಾನೂನು ಪ್ರಕಾರ ಮತ್ತು ನಾನೊಬ್ಬ ವೈದ್ಯನಾಗಿರುವ ಕಾರಣದಿಂದ ಆಕೆಯ ಪರಿಚಯ ಗೌಪ್ಯವಾಗಿಟ್ಟಿದ್ದೇನೆ. ಅಭಿಸಾರಿಕಾ ಈಗ ಸ್ವಲ್ಪ ಮಟ್ಟಿಗೆ ಮಾನಸಿಕ ವೇದನೆಯಿಂದ ಬಳಲುತ್ತಿದ್ದಾಳೆ. ಆಕೆ ಪುರುಷರ ವಿರುದ್ಧ ಹಗೆತನ ಸಾಧಿಸಬೇಕೆಂಬ ಉದ್ದೇಶವಿಟ್ಟುಕೊಂಡು ತನ್ನನ್ನು ಅರಸಿ ಬಂದವರಿಗೆ ಏಕಕಾಲದಲ್ಲಿ 'ಮೈ-ದಾನ" ಮತ್ತು 'ಏಡ್ಸ್-ದಾನ" ಮಾಡುತ್ತಿದ್ದಳು" ಎಂದಿದ್ದಾರೆ.
ಅಭಿಸಾರಿಕಾಳನ್ನು ಆಕೆಯ ಸಂಬಂಧಿಗಳು ನನ್ನ ಕ್ಲಿನಿಕಿಗೆ ಕರೆ ತಂದಿದ್ದರು. ಈಗಲೂ ಆಕೆ ದ್ವೇಷವೆಂಬ ಹಠದಿಂದ ತಿರುಗಿ ನೋಡುವ ಸ್ಥಿತಿಯಲಿಲ್ಲ. ಆಕೆಗೆ ತನ್ನ 10 ವರ್ಷದ ಕಿವುಡ ಮಗನನ್ನು ಆಶ್ರಮದಲ್ಲಿರಿಸಿದ್ದಾಳೆ. ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ಆಕೆಯನ್ನು ಈ ಹಗೆತನದಿಂದ ತಡೆಯುವವರು ಇಲ್ಲವಾಗಿದ್ದಾರೆ
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications