ಕೇಂದ್ರ ಸರಕಾರಿ ನೌಕರರೂ ಲೋಕಾಯುಕ್ತ ವ್ಯಾಪ್ತಿಗೆ

ಇಷ್ಟು ದಿನ ರಾಜ್ಯ ಸರಕಾರಿ ನೌಕರರನ್ನು ಮಾತ್ರ ತನ್ನ ಬಲೆಗೆ ಬೀಳಿಸುತ್ತಿದ್ದ ಲೋಕಾಯುಕ್ತ ಪೊಲೀಸರಿಗೆ ಕೇಂದ್ರ ನೌಕರರನ್ನೂ ತನ್ನ ಖೆಡ್ಡಾಗೆ ಬೀಳಿಸುವ ಅಧಿಕಾರ ಪ್ರಾಪ್ತಿಯಾಗಿದೆ. ಸಿಬ್ಬಂದಿ ಕೊರತೆ ಮತ್ತು ಸಂವಹನ ಸಮಸ್ಯೆ ಹಿನ್ನೆಲೆಯಲ್ಲಿ ಸಿಬಿಐ ಲೋಕಾಯುಕ್ತರ ನೆರವು ಪಡೆಯಲು ನಿರ್ಧರಿಸಿದೆ. ಲೋಕಾಯುಕ್ತ ಎಡಿಜಿಪಿ ರೂಪಕುಮಾರ್ ದತ್ತಾ ಈವಿಚಾರವನ್ನು ದೃಢಪಡಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳ ಲೋಕಾಯುಕ್ತ ಎಸ್ಪಿ ಹಾಗೂ ಡಿವೈಎಸ್ಪಿಗಳಿಗೆ ಈ ಸಂಬಂಧ ಆರ್.ಕೆ. ದತ್ತಾ ಅವರು ಸೂಚನೆ ಕಳಿಸಿದ್ದು, ಕೇಂದ್ರ ನೌಕರರನ್ನು ಲಂಚ ಪ್ರಕರಣದಲ್ಲಿ ಬಂಧಿಸಲು ಕ್ರಮ ತೆಗೆದುಕೊಳ್ಳುವ ಆದೇಶ ಹೊರಡಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ಎಂಬ ಭಿನ್ನತೆ ಎಲ್ಲಿದೆ!? ಸಾರ್ವಜನಿಕ ಕೆಲಸಕ್ಕೆ ಜನಸಾಮಾನ್ಯರಿಂದ ಹಣ ಪಡೆಯುವುದು ಅಪರಾಧ. ಆದ್ದರಿಂದ ಕೇಂದ್ರ ಸರಕಾರಿ ನೌಕರರು ಲಂಚಕ್ಕೆ ಕೈಚಾಚಿದಾಗ ಸಾರ್ವಜನಿಕರು ಇನ್ನು ಮುಂದೆ ಅವರನ್ನು ನೇರವಾಗಿ ಲೋಕಾಯುಕ್ತಕ್ಕೆ ಒಪ್ಪಿಸಬಹುದು.











Click it and Unblock the Notifications