ಬೆಂಗಳೂರಿನಲ್ಲಿ ಹಾಡುಹಗಲೇ ಅರ್ಧ ಕೆಜಿ ಚಿನ್ನ ಲೂಟಿ

ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಚಿನ್ನ ಕೊಳ್ಳುವ ನೆಪದಲ್ಲಿ ತೋರಿಸಲೆಂದು ತೆಗೆದಿಟ್ಟಿದ್ದ ಆಭರಣಗಳನ್ನು ಚೀಲದಲ್ಲಿ ತುಂಬಿಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಅರ್ಧ ಕೆಜಿ ಚಿನ್ನ ಲಪಟಾಯಿಸಲಾಗಿದೆ ಎಂದು ಸೂರ್ಯ ಜ್ಯುವೆಲ್ಲರಿ ಅಂಗಡಿಯ ಮಾಲಿಕ ತಾರಾನಾಥ್ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳ್ಳರು ಹಿಂದೆ ಕೂಡ ಎರಡು ಬಾರಿ ಈ ಚಿನ್ನದಂಗಡಿಗೆ ಬಂದಿದ್ದರು. ಮಾರವಾಡಿ ಭಾಷೆ ಮಾತನಾಡುತ್ತಿದ್ದ ಅವರು ತಾರಾನಾಥನನ್ನು ಪರಿಚಯ ಮಾಡಿಕೊಂಡಿದ್ದಾರೆ. ಈ ಪರಿಚಯದ ದುರ್ಲಾಭ ಪಡೆದು ತೆಗೆದಿಟ್ಟಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಯಾವುದೋ ಕಾರಣಕ್ಕೆಂದು ತಾರಾನಾಥ್ ಅವರು ಹೊರ ಹೋದಾಗ ಈ ಘಟನೆ ಜರುಗಿದೆ. ಒಳಗೆ ಬಂದು ನೋಡಿದಾಗ ಚಿನ್ನವೂ ಇಲ್ಲ, ಲೂಟಿಕೋರರೂ ಇಲ್ಲ. ಕ್ಷಣಾರ್ಧದಲ್ಲಿ ಚೀಲದಲ್ಲಿ ಚಿನ್ನವನ್ನು ತುಂಬಿಕೊಂಡು ಮೂವರೂ ಒಂದೇ ಬೈಕಿನಲ್ಲಿ ಪರಾರಿಯಾಗಿದ್ದಾರೆ.












Click it and Unblock the Notifications