ವೆಬ್ ಮೂಲಕ ಮನೆ ಬಾಗಿಲಿಗೆ ಆಟೋರಿಕ್ಷಾ ಸೇವೆ

ವೆಬ್ಸೈಟ್ ಪಟ್ಟಿಯಲ್ಲಿರುವ ಒಬ್ಬರಿಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ಹೆಚ್ಚುವರಿ ಶುಲ್ಕವಿಲ್ಲದೆ ರಿಕ್ಷಾ ಸೇವೆ ಲಭ್ಯವಾಗುತ್ತದೆ. 'ಈ ಸೌಲಭ್ಯಕ್ಕಾಗಿ ನಾವು ಹಲವು ಬಾರಿ ರಿಕ್ಷಾ ಚಾಲಕರ ಸಮೀಕ್ಷೆ ನಡೆಸಿ ಹಲವು ಮಾಹಿತಿಗಳನ್ನು ಸಂಗಹಿಸಿದ ಬಳಿಕ ಯಾವುದೇ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರದ ಚಾಲಕರನ್ನು ಮಾತ್ರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಗ್ರಾಹಕರು ಅವಶ್ಯಕತೆ ಬಿದ್ದಾಗ ಪಟ್ಟಿಯಲ್ಲಿರುವ ಯಾರೊಬ್ಬರಿಗಾದರೂ ಕರೆ ಮಾಡಿದರೆ ಮನೆಬಾಗಿಲಿಗೆ ಸೇವೆ ನೀಡಲಾಗುವುದು ಎಂದು ವೆಬ್ಸೈಟ್ ಸೇವೆಯ ರುವಾರಿ ಸೀತಾರಾಮ ವಿಶ್ವನಾಥ ಹೇಳುತ್ತಾರೆ.
ಸದ್ಯಕ್ಕೆ ರಿಕ್ಷಾ ಚಾಲಕರಾದ ಆರ್ ಪ್ರಸನ್ನ , ಶೆನಾಯ್ ಕಿರಣ್, ಪೆರ್ಸಿ ಮತ್ತು ನಿರಂಜನ ರಾಧಾಕೃಷ್ಣ ಆನ್ಲೈನ್ ಸೇವೆಯಲ್ಲಿ ಹೆಸರು ದಾಖಲಿಸಿದ್ದಾರೆ. ಅವರ ಸಂಪರ್ಕ ನಂಬರನ್ನು ಸುಲಭವಾಗಿ ಗ್ರಾಹಕರು ಪಡೆಯುವುದರಿಂದ ಈ ಸೇವೆ ಹೆಚ್ಚು ಸುಲಭವಾಗಲಿದೆ. ಜೊತೆಗೆ ಅಧಿಕ ಶುಲ್ಕ ಕೇಳುವ ಮತ್ತು ತಪ್ಪು ಹಾದಿ ಹಿಡಿಯವ ರಿಕ್ಷಾ ಚಾಲಕರನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಚಾಲಕ ರಾಧಾಕೃಷ್ಣ ಹೇಳಿದ್ದಾರೆ.
ಸೇವೆ ಆರಂಭಿಸಿದ ಉದ್ದೇಶ: ಆಟೋರಿಕ್ಷಾ ಚಾಲಕರ ಮೇಲಿರುವ ಅಪವಾದ ದೂರಾಗಿಸುವುದು, ಚಾಲಕರ ಘನತೆಯನ್ನು ಎತ್ತಿ ಹಿಡಿಯುವುದು ನಮ್ಮ ಉದ್ದೇಶ. ಜೊತೆಗೆ ಸ್ವಸಹಾಯ ಸಂಘ ಹಾಗೂ ಖಾಯಂ ಪ್ರಯಾಣಿಕರಿಂದ ಈ ಯೋಜನೆ ಇನ್ನಷ್ಟು ವಿಸ್ತರಣೆಗೊಳಿಸಲು ಸಿದ್ಧತೆ ನಡೆದಿದೆ.
ಚಾಲಕರಲ್ಲಿ ಹಾಗೂ ಪ್ರಯಾಣಿಕರಲ್ಲಿ ನಾಗರೀಕ ಪ್ರಜ್ಞೆ ಹೆಚ್ಚಿಸುವುದು, ಚಾಲಕರೊಡನೆ ಕಿತ್ತಾಟ, ದೂರುಗಳನ್ನು ಕಡಿಮೆಗೊಳಿಸುವುದು ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸುವುದು ಇನ್ನೊಂದು ಪ್ರಮುಖ ಉದ್ದೇಶ. ಮನೆ ಬಾಗಿಲಿಗೆ ಸೇವೆ ದೊರಕಿಸುವ ಸೌಲಭ್ಯ ಹೊಂದಿರುವ ಈ ವೆಬ್ಸೈಟ್ ಸೇವೆಯು ಮುಂದಿನ ತಿಂಗಳಿಂದ ಜಾರಿಗೊಳ್ಳಲಿದೆ ಎಂದು ಟೆಕ್ಕಿ ವಿಶ್ವನಾಥ್ ತಿಳಿಸಿದರು.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications