ವೆಬ್ ಮೂಲಕ ಮನೆ ಬಾಗಿಲಿಗೆ ಆಟೋರಿಕ್ಷಾ ಸೇವೆ

ವೆಬ್ಸೈಟ್ ಪಟ್ಟಿಯಲ್ಲಿರುವ ಒಬ್ಬರಿಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ಹೆಚ್ಚುವರಿ ಶುಲ್ಕವಿಲ್ಲದೆ ರಿಕ್ಷಾ ಸೇವೆ ಲಭ್ಯವಾಗುತ್ತದೆ. 'ಈ ಸೌಲಭ್ಯಕ್ಕಾಗಿ ನಾವು ಹಲವು ಬಾರಿ ರಿಕ್ಷಾ ಚಾಲಕರ ಸಮೀಕ್ಷೆ ನಡೆಸಿ ಹಲವು ಮಾಹಿತಿಗಳನ್ನು ಸಂಗಹಿಸಿದ ಬಳಿಕ ಯಾವುದೇ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿರದ ಚಾಲಕರನ್ನು ಮಾತ್ರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಗ್ರಾಹಕರು ಅವಶ್ಯಕತೆ ಬಿದ್ದಾಗ ಪಟ್ಟಿಯಲ್ಲಿರುವ ಯಾರೊಬ್ಬರಿಗಾದರೂ ಕರೆ ಮಾಡಿದರೆ ಮನೆಬಾಗಿಲಿಗೆ ಸೇವೆ ನೀಡಲಾಗುವುದು ಎಂದು ವೆಬ್ಸೈಟ್ ಸೇವೆಯ ರುವಾರಿ ಸೀತಾರಾಮ ವಿಶ್ವನಾಥ ಹೇಳುತ್ತಾರೆ.
ಸದ್ಯಕ್ಕೆ ರಿಕ್ಷಾ ಚಾಲಕರಾದ ಆರ್ ಪ್ರಸನ್ನ , ಶೆನಾಯ್ ಕಿರಣ್, ಪೆರ್ಸಿ ಮತ್ತು ನಿರಂಜನ ರಾಧಾಕೃಷ್ಣ ಆನ್ಲೈನ್ ಸೇವೆಯಲ್ಲಿ ಹೆಸರು ದಾಖಲಿಸಿದ್ದಾರೆ. ಅವರ ಸಂಪರ್ಕ ನಂಬರನ್ನು ಸುಲಭವಾಗಿ ಗ್ರಾಹಕರು ಪಡೆಯುವುದರಿಂದ ಈ ಸೇವೆ ಹೆಚ್ಚು ಸುಲಭವಾಗಲಿದೆ. ಜೊತೆಗೆ ಅಧಿಕ ಶುಲ್ಕ ಕೇಳುವ ಮತ್ತು ತಪ್ಪು ಹಾದಿ ಹಿಡಿಯವ ರಿಕ್ಷಾ ಚಾಲಕರನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಚಾಲಕ ರಾಧಾಕೃಷ್ಣ ಹೇಳಿದ್ದಾರೆ.
ಸೇವೆ ಆರಂಭಿಸಿದ ಉದ್ದೇಶ: ಆಟೋರಿಕ್ಷಾ ಚಾಲಕರ ಮೇಲಿರುವ ಅಪವಾದ ದೂರಾಗಿಸುವುದು, ಚಾಲಕರ ಘನತೆಯನ್ನು ಎತ್ತಿ ಹಿಡಿಯುವುದು ನಮ್ಮ ಉದ್ದೇಶ. ಜೊತೆಗೆ ಸ್ವಸಹಾಯ ಸಂಘ ಹಾಗೂ ಖಾಯಂ ಪ್ರಯಾಣಿಕರಿಂದ ಈ ಯೋಜನೆ ಇನ್ನಷ್ಟು ವಿಸ್ತರಣೆಗೊಳಿಸಲು ಸಿದ್ಧತೆ ನಡೆದಿದೆ.
ಚಾಲಕರಲ್ಲಿ ಹಾಗೂ ಪ್ರಯಾಣಿಕರಲ್ಲಿ ನಾಗರೀಕ ಪ್ರಜ್ಞೆ ಹೆಚ್ಚಿಸುವುದು, ಚಾಲಕರೊಡನೆ ಕಿತ್ತಾಟ, ದೂರುಗಳನ್ನು ಕಡಿಮೆಗೊಳಿಸುವುದು ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸುವುದು ಇನ್ನೊಂದು ಪ್ರಮುಖ ಉದ್ದೇಶ. ಮನೆ ಬಾಗಿಲಿಗೆ ಸೇವೆ ದೊರಕಿಸುವ ಸೌಲಭ್ಯ ಹೊಂದಿರುವ ಈ ವೆಬ್ಸೈಟ್ ಸೇವೆಯು ಮುಂದಿನ ತಿಂಗಳಿಂದ ಜಾರಿಗೊಳ್ಳಲಿದೆ ಎಂದು ಟೆಕ್ಕಿ ವಿಶ್ವನಾಥ್ ತಿಳಿಸಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications