ಉಕ್ಕಿನ ಹಕ್ಕಿಗಳ ಚಿತ್ತಾರಕ್ಕೆ ಉದ್ಯಾನನಗರಿ ರೆಡಿ

ಯಲಹಂಕದಲ್ಲಿರುವ ಏರ್ ಫೋರ್ಸ್ ಸ್ಟೇಷನ್ ಗೆ ವಿವಿಧ ಕಡೆಯಿಂದ ಯುದ್ಧವಿಮಾನಗಳು, ಜೆಟ್ ಗಳು, ವಿಮಾನಗಳು ಬಂದಿಳಿಯುತ್ತಿವೆ. ಇಟಲಿ ಏರ್ ಫೋರ್ಸ್ ನಿಂದ ಎರಡು ಯೂರೊಫೈಟರ್ ಟೈಪಾನ್ಸ್ ಈಗಾಗಲೇ ಬಂದಾಗಿದೆ. ವೈಮಾನಿಕ ಪ್ರದರ್ಶನ ನೀಡುವ ತಂಡದಲ್ಲಿ ಸೂರ್ಯ ಕಿರಣ್, ಸಾರಂಗ್, ಫ್ಲೈಯಿಂಗ್ ಬುಲ್ಸ್ ರೆಡಿಯಾಗಿ ಆಕಾಶ ನೋಡುತ್ತಿವೆ.
ಆಸ್ಟ್ರೇಲಿಯಾದ ಫ್ಲೈಯಿಂಗ್ ಬುಲ್ಸ್ ಮೊದಲ ಬಾರಿಗೆ ಬೆಂಗಳೂರಿನ ಏರ್ ಶೋಗೆ ಆಗಮಿಸಿರುವುದು ವಿಶೇಷ. ಇದರೊಂದಿಗೆ ಆಗ್ರಾದಿಂದ ಆಕಾಶ್ ದೀಪ್ ಕೂಡ ಬರಲಿದೆ. ಬೋಯಿಂಗ್ ನ ಎಫ್-16, ಮಾರ್ಟಿನ್ ನ ಎಫ್ಎ/18, ಸುಕೊಯಿ ಎಂಕೆಐ 30, ಗ್ರಿಪ್ಪೆನ್, ಯೂರೋಕೊಪ್ಟಾರ್ ಸೇರಿದಂತೆ ಸುಮಾರು 50 ಬಗೆಯ ವಿವಿಧ ವಿಮಾನಗಳು ಪ್ರದರ್ಶನದಲ್ಲಿರಲಿವೆ.
ವೈಮಾನಿಕ ಪ್ರದರ್ಶನಕ್ಕೆ ಸಂಬಂಧಿಸಿದ ಶೇಕಡಾ 80ರಷ್ಟು ಕೆಲಸಗಳು ಪೂರ್ಣಗೊಂಡಿದ್ದು, ಉಕ್ಕಿನ ಹಕ್ಕಿಗಳ ಚಿತ್ತಾರ ನೋಡಲು ಕೆಲವೇ ದಿನ ಬಾಕಿ ಉಳಿದಿದೆ. ಬೆಂಗಳೂರು ಏರ್ ಶೋಗೆ ಅತ್ಯಧಿಕ ಸಂಖ್ಯೆಯಲ್ಲಿ ವಿದೇಶಿಯರು ಭೇಟಿ ನೀಡುವ ನಿರೀಕ್ಷೆಯಿದೆ. ಸುಮಾರು 70 ಸಾವಿರ ವಿದೇಶಿಯರು ಭೇಟಿ ನೀಡುವ ನಿರೀಕ್ಷೆಯನ್ನು ರಕ್ಷಣಾ ಸಚಿವಾಲಯದ ಮೂಲಗಳು ವ್ಯಕ್ತಪಡಿಸಿವೆ.
ವೈಮಾನಿಕ ಪ್ರದರ್ಶನದಲ್ಲಿ ಪ್ರಮುಖ ಯುದ್ಧವಿಮಾನಗಳು ಸೇರಿದಂತೆ ಸುಮಾರು 260 ವಿದೇಶಿ ವಿಮಾನ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ರಕ್ಷಣಾ ಸಚಿವಾಲಯದ ವೈಮಾನಿಕ ಪ್ರದರ್ಶನ ಸಮಿತಿಯ ನಿರ್ದೇಶಕ, ವಿಂಗ್ ಕಮಾಂಡರ್ ಎಂ ಡಿ ಸಿಂಗ್ ಹೇಳಿದ್ದಾರೆ.
ಟಿಕೇಟ್ ಎಲ್ಲಿ ದೊರಕುತ್ತದೆ? ವೈಮಾನಿಕ ಪ್ರದರ್ಶನದ ದಿನದಿಂದಲೇ ಪ್ರದರ್ಶನ ಸ್ಥಳದಲ್ಲಿ ಟಿಕೇಟ್ ದೊರಕುತ್ತದೆ. ಗರುಡಾ ಮಾಲ್, ಫೋರಂ ಮತ್ತು ಮಂತ್ರಿ ಮಾಲ್ ಗಳಲ್ಲೂ ಟಿಕೇಟ್ ದೊರಕುತ್ತದೆ. ಟಿಕೇಟ್ ದರ 400 ರೂಪಾಯಿ. ವೀಕೆಂಡ್ ದಿನಗಳಲ್ಲಿ ಮಾತ್ರ 500 ರೂಪಾಯಿ.
ಪ್ರತಿದಿನ ಪೂರ್ವಾಹ್ನ 10 ಗಂಟೆಗೆ ಮತ್ತು ಅಪರಾಹ್ನ 2.30ರಿಂದ ಸಂಜೆ 5ಗಂಟೆವರೆಗೆ ಎರಡು ವೈಮಾನಿಕ ಪ್ರದರ್ಶನ ನಡೆಯಲಿದೆ. ಆದರೆ ಮೊದಲ ದಿನ ಪೂರ್ವಾಹ್ನದ ಪ್ರದರ್ಶನ ಇರುವುದಿಲ್ಲ.
In English
ಏರೋ ಶೋ ಬಗ್ಗೆ ಇನ್ನಷ್ಟು..
* ವಿಶ್ವದಲ್ಲಿ ನಡೆಯುವ ವೈಮಾನಿಕ ಪ್ರದರ್ಶನಗಳಲ್ಲಿ ಏರೋ ಇಂಡಿಯಾಕ್ಕೆ ಅಗ್ರ 5ನೇ ಸ್ಥಾನವಿದೆ. ಇದು ಏಷ್ಯಾದಲ್ಲಿ ನಡೆಯುವ ಪ್ರಮುಖ ವೈಮಾನಿಕ ಪ್ರದರ್ಶನ.
* ಜಾಗತಿಕ ಆರ್ಥಿಕ ಹಿಂಜರಿತ ಕೊನೆಗೊಂಡಿರುವುದರಿಂದ ಭಾರತದಲ್ಲಿ ಅವಕಾಶಗಳ ಹುಡುಕಾಟದಲ್ಲಿ ದಾಖಲೆ ಸಂಖ್ಯೆಯಲ್ಲಿ ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
* 5 ದಿನಗಳ ಪ್ರದರ್ಶನದಲ್ಲಿ ಸುಮಾರು 1.75 ಲಕ್ಷಕ್ಕಿಂತ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
* ಸುಮಾರು 160 ದೇಶಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಕೇಂದ್ರ ಸರಕಾರ 64 ದೇಶಗಳಿಗೆ ಆಮಂತ್ರಣ ಕಳುಹಿಸಿದೆ.
* ಏರೋ ಇಂಡಿಯಾದಲ್ಲಿ 5 ತೇಜಸ್ ಯುದ್ಧವಿಮಾನಗಳು ಪ್ರದರ್ಶನ ನೀಡಲಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications