ಪಂ. ಜೋಶಿ ಅವಮಾನಿಸಿದವರನ್ನು ಏನ್ಮಾಡ್ಬೇಕು?

ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಅನ್ನುವ ಹಾಗೆ. ಭೀಮಸೇನ ಜೋಶಿ ಅವರಂತಹ ಕಸ್ತೂರಿ ಪರಿಮಳವನ್ನು ಅರಿಯದೆ, ಕನಿಷ್ಠ ಪ್ರಜ್ಞೆ ಇಲ್ಲದೆ ಪ್ರಜ್ಞೆ ತಪ್ಪಿದವರಂತೆ ಟೀಕೆ ಮಾಡಿರುವ ಚಿಕ್ಕಪೇಟೆ ಕಾರ್ಪೊರೇಟರ್ ಎ ಎನ್ ಶಿವಕುಮಾರ್ ಅವರೆಡೆಗೊಂದು ದಿಕ್ಕಾರವಿರಲಿ. ಕುಡಿಯುವುದು ಒಂದು ಅಪರಾಧ ಎಂದು ಬಿಂಬಿಸಿರುವ ಈ ಕಾರ್ಪೊರೇಟರ್ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕು? ಭೀಮಸೇನ ಜೋಶಿ ಕುಡಿಯುತ್ತಿದ್ದರು. ಕಾರ್ಯಕ್ರಮಕ್ಕೆ ತೆರಳುವ ಮುಂಚೆ ಕುಡಿದೆ ಹೋಗುತ್ತಿದ್ದರು ಎನ್ನುವುದು ಶುದ್ಧ ಕುಚೋದ್ಯದ ಮಾತು.
ಜೋಶಿ ಬಗ್ಗೆ ಆರೋಪ ಮಾಡಿರುವುದು ಬಿಜೆಪಿ ಪಕ್ಷದ ಕಾರ್ಪೊರೇಟರ್. ಅದೇನೋ ಗೊತ್ತಿಲ್ಲ. ಇತ್ತೀಚೆಗೆ ಈ ಪಕ್ಷದಲ್ಲಿ ಭ್ರಷ್ಟರು, ಅತ್ಯಾಚಾರಿಗಳು, ಲೈಂಗಿಕ ಕಿರುಕುಳ ನೀಡುವವರು, ರೌಡಿಗಳಂತೆ ಸಾರ್ವಜನಿಕ ಸ್ಥಳದಲ್ಲಿ ಅರಚಾಡುವವರು ಹೆಚ್ಚಾಗಿದ್ದಾರೆ. ಇದರಿಂದ ಆ ಪಕ್ಷದ ವರ್ಚಸ್ಸಿಗೆ ತೀವ್ರ ಧಕ್ಕೆ ಉಂಟಾಗಿರುವುದಂತೂ ಸುಳ್ಳಲ್ಲ. ದೇಶ ಭಕ್ತ ಸಂಸ್ಥೆ ಎಂಬ ಹೆಸರು ಪಡೆದಿರುವ ಆರೆಸ್ಸೆಸ್ ಗರಡಿಯಲ್ಲಿ ಪಳಗಿರುವ ಬಿಜೆಪಿ ನಾಯಕರು ಇಂತಹ ಅರಿವುಗೇಡಿ ಕಾರ್ಪೊರೇಟರ್ ಮುಖಕ್ಕೆ ಸರಿಯಾಗಿ ಮಂಗಳಾರತಿ ಮಾಡಬೇಕು ಎನ್ನುವುದು ಸಂಗೀತ ಅಭಿಮಾನಿಗಳು ಅಷ್ಟೇ ಅಲ್ಲ ರಾಜ್ಯ ಜನತೆ ಒತ್ತಾಯಿಸುತ್ತಿದೆ.
ಜೋಶಿ ಅವರನ್ನು ಕೌನ್ಸಿಲ್ ಸಭೆಯಲ್ಲಿ ಅವಮಾನಿಸಿದ ಕಾರ್ಪೊರೇಟರ್ ನಿಗೆ ಶಿಕ್ಷೆ ಆಗಬೇಕು. ಹಾಗಂತ, ಬಿಜೆಪಿ ತನ್ನ ಕಾರ್ಪೊರೇಟರ್ ನ ಸದಸ್ಯತ್ವವನ್ನು ರದ್ದು ಮಾಡಲಿ ಎನ್ನುವುದು ಅತಿರೇಕವಾದೀತು. ಕನಿಷ್ಠ ಪಕ್ಷ ಬಿಬಿಎಂಪಿ ಸದಸ್ಯರಿಗೆ ಅಷ್ಟು ಎಲ್ಲ ಪಕ್ಷಗಳ ಜನಪ್ರತಿನಿಧಿಗಳಿಗೆ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎನ್ನುವುದು ತಿಳುವಳಿಯ ಕಾರ್ಯಾಗಾರವನ್ನಾದರೂ ಮಾಡುವುದು ಒಳಿತಲ್ಲವೇ. ಇದರಿಂದ ಮುಂದಿನ ದಿನಗಳಲ್ಲಿ ಸಾಧಕರಿಗೆ ಆಗುವ ಅವಮಾನಗಳನ್ನು ತಡೆಯಬಹುದಲ್ಲವೇ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications