ಪಾರದರ್ಶಕ ಭ್ರಷ್ಟಾಚಾರವೇ ಸಿಎಂ ಸಾಧನೆ

ಕೆಪಿಸಿಸಿ ಕಚೇರಿಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕರ್ನಾಟಕದಲ್ಲಿ ಇದುವರೆಗೂ ಆಡಳಿತ ಪಾರದರ್ಶಕವಾಗಿತ್ತು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಭ್ರಷ್ಟಾಚಾರವೂ ಪಾರದರ್ಶಕವಾಗಿದೆ ಎಂದರು. ಕಂಸನ ಕೊನೆಗಾಲದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಶ್ರೀಕೃಷ್ಣನೇ ಕಾಣುತ್ತಿದ್ದಂತೆ ಯಡಿಯೂರಪ್ಪರಿಗೆ ಎಲ್ಲಿ ನೋಡಿದಲ್ಲಿ ರಾಜ್ಯಪಾಲರೇ ಕಾಣುತ್ತಿದ್ದಾರೆ. ಇದರಿಂದ ಸರಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಮೊಯ್ಲಿ ಭವಿಷ್ಯ ನುಡಿದರು.
ಭೂ ಹಗರಣ, ಗಣಿ ಹಗರಣ ಸೇರಿದಂತೆ ಎಲ್ಲ ಹಗರಣಗಳು ಪಾರದರ್ಶಕವಾಗಿದೆ. ಇದೇ ಯಡಿಯೂರಪ್ಪರ ಸರಕಾರದ ಸಾಧನೆ ಎಂದು ಟೀಕಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಎಷ್ಟು ಭಯಾನಕವಾಗಿದೆ ಎಂದರೆ ಎಲ್ಲವೂ ಬ್ಯಾಂಕು ಖಾತೆಯ ಮೂಲಕ, ಡಿಡಿ, ಚೆಕ್ಕುಗಳ ಮೂಲಕ ನಡೆಯುತ್ತಿದೆ. ಇದು ಆತಂಕದ ಸಂಗತಿ. ಇಂತಹ ಸನ್ನಿವೇಶವನ್ನು ನಾವೆಂದೂ ಕಂಡಿರಲಿಲ್ಲ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications