ಜ.24 : ಗೌರ್ನರ್ ವಿರುದ್ಧ ಬಿಜೆಪಿ ಪೆರೇಡ್

ಜಸ್ಟೀಸ್ ಲಾಯರ್ಸ್ ಫೋರಂಗೆ ತಮ್ಮ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ಕೊಡಬಹುದು ಎಂದು ಆತಂಕಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿ ಬಿಜೆಪಿ ಮುಖಂಡರೊಂದಿಗೆ ಮಾತಕತೆ ನಡೆಸಿದ್ದಾರೆ. ಚರ್ಚೆ ನಂತರ ಮಾತನಾಡಿದ ಸಂಸದ ಡಿಬಿ ಚಂದ್ರೇಗೌಡ, ಜ. 24 ರಂದು ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಆಗ್ರಹಿಸಿ ಪೆರೇಡ್ ನಡೆಸಲು ನಿರ್ಧರಿಸಿರುವುದಾಗಿ ಹೇಳಿದರು.
ಪದೆಪದೇ ಸರಕಾರ ಅಭಧ್ರಗೊಳಿಸಲು ಯತ್ನಿಸುತ್ತಿರುವ ರಾಜ್ಯಪಾಲರ ವಿರುದ್ಧ ಯಾವ ಬತ್ತಳಿಕೆ ಪ್ರಯೋಗಿಸಬೇಕು. ಸದ್ಯ ಎದುರಾಗಿರುವ ಕಂಟಕದಿಂದ ಹೇಗೆ ಪಾರಾಗಬೇಕು ಎಂಬ ಬಗ್ಗೆ ಚರ್ಚಿಸಲು ಇಂದು ಬೆಂಗಳೂರಿನಲ್ಲಿ ಸಚಿವ ಸಂಪುಟ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಮುಂದಾದರೆ ಏನು ಮಾಡಬೇಕು. ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಪಕ್ಷದ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.(ಎಚ್ ಆರ್ ಭಾರದ್ವಾಜ್)












Click it and Unblock the Notifications