ಗೃಹಿಣಿ ಆತ್ಮಹತ್ಯೆ : ಪತಿಯ ಬಂಧನವಿಲ್ಲ...?

ರೂಪಶ್ರೀ ಪತಿ ಕಿರಣ್ ಕುಮಾರ್ ಅವರು ಹಾಲಿ ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ಅವರ ಸಂಬಂಧಿ. ಆರೋಪಿಗಳಾದ ಕಿರಣ್ ಕುಮಾರ್, ಆತನ ತಾಯಿ ಗೌರಿ, ಸಹೋದರಿ ರಶ್ಮಿ ಮತ್ತು ತಂದೆ ಹನುಮಯ್ಯ ಅವರನ್ನು ಬಂಧಿಸದಂತೆ ಜಗ್ಗೇಶ್ ಅವರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ರೂಪಶ್ರೀ ಅವರ ತಂದೆ ರಾಮಣ್ಣ ದೂರಿದ್ದಾರೆ.
ಬಿಜೆಪಿ ನಾಯಕರು ಹಾಗೂ ಕೆಲ ಸಚಿವರುಗಳು ಪೊಲೀಸರ ಮೇಲೆ ಪ್ರಭಾವ ಬೀರಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕೈಚೆಲ್ಲುತ್ತಿದ್ದಾರೆ ಎಂದು ರಾಮಣ್ಣ ಆರೋಪಿಸಿದ್ದಾರೆ. ರಾಮಣ್ಣ ಅವರು ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವರದಕ್ಷಿಣೆ ಕಿರುಕುಳ ತಾಳಲಾರದೆ ರೂಪಶ್ರೀ ಜ.14 ರಂದು ತವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.(ಕ್ರೈಂ)












Click it and Unblock the Notifications