ದ್ವಿಚಕ್ರವಾಹನ ಏರಿ ಬಳ್ಳಾರಿ ರೆಡ್ಡಿ ಗಸ್ತು

ಭಾನುವಾರ ಬೆಳಗ್ಗೆ ಎಲ್ಲರೂ ರಜಾ ಮೂಡಿನಲ್ಲಿರುತ್ತಾರೆ. ದಿನದ ಸಹಜಕ್ಕಿಂತಲೂ ಒಂದೆರೆಡು ತಾಸು ಹೆಚ್ಚಿನ ನಿದ್ರೆ ಮಾಡುವುದು ಅಥವಾ ದೈನಂದಿನ ಕೆಲಸಗಳಲ್ಲಿ ನಿರಾಸಕ್ತಿ ತೋರುವುದು ತೀರ ಸಹಜ. ಅದರಲ್ಲೂ ಮಾಗಿಯ ಛಳಿ ಇನ್ನೂ ಮುಗಿದಿಲ್ಲ, ಸಂಕ್ರಮಣದ ಬಿಸಿ ಬಳ್ಳಾರಿಗರಿಗೆ ತಾಕಿಲ್ಲ.
ಸಿಕ್ಕಾಪಟ್ಟೆ ಸುತ್ತಾಡಿದ ರೆಡ್ಡಿ: ಇಂಥ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಏಕಾಏಕಿ ನಗರ ಪ್ರದಕ್ಷಿಣೆ ಹಾಕಿದ್ದು ಅನೇಕರ ಛಳಿಯನ್ನು ಹಾಸಿಗೆಯಲ್ಲೇ ಒದ್ದು ಓಡಿಸಿದೆ. ಬಿಸಿಯನ್ನು ಹೊದ್ದು ಮಲಗಿದ್ದಲ್ಲೇ ಮೂಡಿಸಿದೆ. ಭಾನುವಾರ ಬೆಳಗ್ಗೆಯಿಂದಲೇ ತಮ್ಮ ಆಪ್ತರು, ಬೆಂಬಲಿಗರು ಹಾಗೂ ಸಿಬ್ಬಂದಿಯ ಜೊತೆ ಜೊತೆಯಲ್ಲೇ ಬೆಂಗಳೂರು ರಸ್ತೆ, ದೊಡ್ಡ ತರಕಾರಿ ಮಾರುಕಟ್ಟೆ, ಕೋರ್ಟ್ ಮಸೀದಿ ರಸ್ತೆ, ಗಡ್ಡೆ ಕೆಳಗಿನ ಏರಿಯಾ, ವಡ್ಡರಬಂಡೆ, ಸತ್ಯನಾರಾಯಣಪೇಟೆ 2ನೇ ಕ್ರಾಸ್, ಗೊಲ್ಲನರಸಪ್ಪ ಕಾಲೋನಿ, ಪಾರ್ವತಿನಗರ, ಮಿಲ್ಲಾರಪೇಟೆ, ಹನುಮಾನ ನಗರಗಳಲ್ಲಿ ವಿಸ್ತೃತವಾಗಿ ಸಂಚರಿಸಿದರು.
ಈ ಸಂಚಾರದಲ್ಲಿ ಶಾಸಕರು ಸುಮ್ಮನೆ ನಗರ ಸುತ್ತಲಿಲ್ಲ. ಅಲ್ಲಲ್ಲಿ ನಿಂತು, ಕಸವನ್ನು ಸಿಕ್ಕಾಪಟ್ಟೆ ಚೆಲ್ಲಾಪಿಲ್ಲಿಯಾಗಿ ಹಾಕುವ ಮೂಲಕ ಉಂಟಾಗುವ ವ್ಯಾಧಿಗಳು, ಹರಡುವ ವೈರಸ್ಗಳು ಮತ್ತು ಇನ್ನಿತರೆ ವಿಚಾರಗಳ ಕುರಿತು ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ನೀತಿ ಪಾಠ ಮಾಡಿದರು. ಅವರಲ್ಲಿ ಜಾಗೃತಿ ಮೂಡಿಸಿದರು.
ಅಷ್ಟೇ ಅಲ್ಲ, ಕಸ ವಿಲೇವಾರಿ ಕುರಿತು 10 ಪದವೀಧರರ ಮೂಲಕ ಜಾಗೃತಿ ಶಿಬಿರಗಳನ್ನು ನಡೆಸಲು ಪಾಲಿಕೆ ಮುಂದಾಗಿದೆ. 'ಸ್ವಚ್ಛ ಬಳ್ಳಾರಿ, ಸುಂದರ ಬಳ್ಳಾರಿ" ಯೋಜನೆ ಸಂಪೂರ್ಣ ಯಶಸ್ವಿ ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಅಹರ್ನಿಷಿಯಾಗಿ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದರು. [ಬಳ್ಳಾರಿ]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications