ಮೈಸೂರಿನ ಮುಂಜಾನೆಯ ಮಂಜಿನ ದೃಶ್ಯ ಕಾವ್ಯ...

ನಗರದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಅದೇ ಜನ... ಅದೇ ವಾಹನಗಳು... ಬೋರ್ ಹೊಡೆಸುತ್ತವೆ. ಆದರೆ ಅದೇ ಒಂದು ಮುಂಜಾನೆ ಹಳ್ಳಿಯ ರಸ್ತೆಯಲ್ಲಿ ನಡೆದು ನೋಡಿ ಯಾರು ಯಾರೆಂದು ಕಾಣದಷ್ಟು ಮಂಜು... ಪಾದರಸದಂತೆ ಹರಿದಾಡೋ ಮಂಜಿನಾಚೆ ರಕ್ತ ಚೆಂಡಿನಂತೆ ಕಂಗೊಳಿಸುವ ಸೂರ್ಯ... ಒಮ್ಮೊಮ್ಮೆ ದಟ್ಟ ಮಂಜನ್ನು ಬಲತ್ಕಾರವಾಗಿ ಸೀಳಿ ಭುವಿಯತ್ತ ಬರಲು ಪರದಾಡುವ ಸೂರ್ಯ ರಶ್ಮಿ... ನೋಡುತ್ತಾ ನಿಂತರೆ ಸುಂದರ ದೃಶ್ಯ ಕಾವ್ಯ...
ಅರಮನೆನಗರಿ ಮೈಸೂರಿನಲ್ಲೀಗ ಮಂಜಿನದ್ದೇ ಕಾರುಬಾರು.... ಮುಂಜಾನೆ ಎದ್ದು ಚಾಮುಂಡಿಬೆಟ್ಟದತ್ತ ಕಣ್ಣು ಹಾಯಿಸಿದರೆ... ಗಹಗಹಿಸಿ ನಗುವ ಮಹಿಷಾಸುರನನ್ನೂ ಬಿಡದೆ ಇಡೀ ಬೆಟ್ಟವನ್ನೇ ತನ್ನ ತೆಕ್ಕೆಯೊಳಗೆ ಬಂಧಿಸಿ ಅದರ ಮೇಲೊಂದು ಮಂಜಿನ ತೆರೆ ಎಳೆದು ವಿಸ್ಮಯ ಮೂಡಿಸುತ್ತದೆ.
ಗ್ಯಾಲರಿ:ಮಂಜು ಮುಸುಕಿದ ಹಾದಿಯಲ್ಲಿ ನಡೆದಾಡಿ
ಇನ್ನು ಒಂದೆರಡು ಹೆಜ್ಜೆ ಮುಂದೆ ಹೋಗಿ ಹಳ್ಳಿಯ ಕಡಗೆ ತಿರುಗಿದರೆ ನೇಗಿಲಯೋಗಿಯ ಮುಂಜಾನೆಯ ಕಾಯಕ ಮಂಜಿನ ಪರದೆಯಲ್ಲಿ ಸರಿದಾಡಿದಾಗ ಅದು ನಮಗೆ ಸುಂದರ ನೋಟ. ಆದರೆ ಆತನಿಗೆ ಅದು ಅನಿವಾರ್ಯ. ಮುಂಜಾನೆಯ ಚಳಿಯನ್ನು ಲೆಕ್ಕಿಸದೆ ಗದ್ದೆ ಉಳುಮೆ ಮಾಡುವ ರೈತ.... ಕಟಾವು ಮಾಡಿದ ಭತ್ತದ ಬೆಳೆಯನ್ನು ಗದ್ದೆಯಿಂದ ಎತ್ತಿಗಾಡಿಯಲ್ಲಿ ಕೊಂಡೊಯ್ಯುವ ಹಾಗೂ ಕಣಕ್ಕೆ ಹರಡುವ ದೃಶ್ಯ ಕಣ್ಮನ ಸೆಳೆಯುತ್ತದೆ.
ಮುಂಜಾನೆಯ ಮಂಜಿನ ಸುಂದರ ದೃಶ್ಯಗಳನ್ನು ಹೇಳುವುದಕ್ಕಿಂತ ನೋಡಿ ಆನಂದಿಸುವುದರಲ್ಲಿಯೇ ಹೆಚ್ಚು ಮಜಾ... ಇನ್ನೇಕೆ ತಡ ಮುಂಜಾನೆ ಕಂಬಳಿ ಸರಿಸಿ ಹೊರ ಬನ್ನಿ... ಒಂದಷ್ಟು ದೂರ ಹಾಗೆ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋಗಿ...[ಮೈಸೂರು]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications