ಆಟಿಕೆ ಪಿಸ್ತೂಲಿನಿಂದ ರಿಕ್ಷಾ ಚಾಲಕನಿಗೆ ಟೆಕ್ಕಿ ಬೆದರಿಕೆ

ಆಗಿದ್ದಿಷ್ಟು: ಮಹದೇವಪುರ ಬಸ್ ನಿಲ್ದಾಣದಿಂದ ದೊಡ್ಡನೆಕ್ಕುಂದಿ ಬಳಿಯ ಆಲ್ಫೇನ್ ಅಪಾರ್ಟ್ಮೆಂಟ್ ಕಡೆಗೆ ಬರುವಂತೆ ಆತ ಆಟೋ ಚಾಲಕ ಗೋಪಿಗೆ ಕೇಳಿದ್ದಾನೆ. ಬರಲು ಒಪ್ಪಿದ ಆತ ಎರಡು ಪಟ್ಟು ಹಣ ನೀಡುವಂತೆ ಬೇಡಿಕೆ ಇಟ್ಟಾಗ ಆಕ್ರೋಶಗೊಂಡ ಪ್ರಭು ಚಾಲಕನಿಗೆ ಚೆನ್ನಾಗಿ ಬೈದಿದ್ದಾನೆ. ಮಾತಿನ ಚಕಮಕಿ, ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಪ್ರಭು ತನ್ನ ಬಳಿಯಿದ್ದ ಆಟಿಕೆ ಪಿಸ್ತೂಲ್ ಹೊರ ತೆಗೆದು ಇದೇನು ಗೊತ್ತಾ, ಸುಟ್ಟು ಬಿಡುತ್ತೀನಿ ಎಂದು ಫಿಲ್ಮಿ ಸ್ಟೈಲ್ ನಲ್ಲಿ ಗದರಿಸಿದ್ದಾನೆ.
ಪಿಸ್ತೂಲ್ ನೋಡಿ ಗಾಬರಿಯಾದರೂ ಗೋಪಿ ನಂತರ ಧೈರ್ಯ ಮಾಡಿ ಪೊಲೀಸರ ಮೊರೆ ಹೊಕ್ಕಿದ್ದಾನೆ. ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ಅವರ ತಂಡ ಟೆಕ್ಕಿಯನ್ನು ಬಂಧಿಸಿ ವಿಚಾರಿಸಿದಾಗ , ನನಗೆ ಜೀವ ಬೆದರಿಕೆ ಇದೆ ಅದಕ್ಕೆ ಪಿಸ್ತೂಲ್ ಇಟ್ಟುಕೊಂಡಿದ್ದೆ ಎಂದಿದ್ದಾನೆ. ಕೊಲೆ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಪೊಲೀಸ್ ಠಾಣೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. [ಆಟೋರಿಕ್ಷಾ]












Click it and Unblock the Notifications