ಮಂಡ್ಯ : ಮಕ್ಕಳನ್ನು ಕೊಂದು ದಂಪತಿಗಳು ನೇಣಿಗೆ
ಮಂಡ್ಯ,
ಡಿ. 28 : ತಮ್ಮ ಎರಡೂ ಮಕ್ಕಳನ್ನು ಕೊಲೆ ಮಾಡಿದ ದಂಪತಿಗಳು ಮರವೊಂದಕ್ಕೆ ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮುತ್ತತ್ತಿ ಪ್ರವಾಸಿ ತಾಣದ ಬಳಿ ಇರುವ ಬಾಣಸಮುದ್ರ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. id="toptextpromo">ಚನ್ನಪಟ್ಟಣ
ತಾಲ್ಲೂಕಿನ ಅಮಲನದೊಡ್ಡಿ ಗ್ರಾಮದ ಕುಮಾರ(35) ಮತ್ತು ಶಾಂತಿ(28) ಮೃತಪಟ್ಟ ದಂಪತಿಗಳಾಗಿದ್ದಾರೆ. ನವೀನ(7), ಜ್ಯೋತಿ(5) ಕೊಲೆಯಾದ ಮಕ್ಕಳಾಗಿದ್ದಾರೆ. ಮಕ್ಕಳನ್ನು ಮೊದಲು ನೇಣುಹಾಕಿ ಕೊಲೆ ಮಾಡಿ ನಂತರ ದಂಪತಿಗಳು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಣಕಾಸಿನ
ತೊಂದರೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಂಪತಿಗಳು ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚನ್ನಪಟ್ಟಣ ಪೊಲೀಸರು ಹೇಳಿದ್ದಾರೆ. (ಕ್ರೈಂ)











Click it and Unblock the Notifications