ಲಾಡು ಜೊತೆಗೆ ವಾಚ್ ಫ್ರೀ ಎಂದು ಬಿಜೆಪಿ

ಬಿಜೆಪಿ ಕಾರ್ಯಕರ್ತರಿಂದ ಸುಮಾರು 50 ಲಡ್ಡು ಹಾಗೂ 150 ಕೈಗಡಿಯಾರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಈ ಪ್ರಸಾದ ಹಂಚಿಕೆಗೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ ಪರಿಣಾಮ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ಕೃಷ್ಣಯ್ಯ ಶೆಟ್ಟಿ ಕೃಪೆ: ಕರ್ನಾಟಕ ಮುಜರಾಯಿ ಮಂಡಳಿಯ ಅಧ್ಯಕ್ಷ ಎನ್ ಕೃಷ್ಣಯ್ಯ ಶೆಟ್ಟಿ ಅವರು ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಿ ವೈಕುಂಠ ಏಕಾದಶಿಯ ಪ್ರಯುಕ್ತ ಪ್ರಸಾದ ರೂಪದಲ್ಲಿ ಮಾತ್ರ ಲಾಡುಗಳ ವಿತರಣೆ ಮಾಡಲು ಅವಕಾಶ ನೀಡಬೇಕು ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ ಎಂದು ಕೋರಿದ್ದರು. ಅದರಂತೆ, ಆಯೋಗ ಕೂಡಾ ಅನುಮತಿ ನೀಡಿದ್ದು, ಆದರೆ, ಶೆಟ್ಟರ ಅನುಯಾಯಿಗಳು ಇದನ್ನು ಸಮರ್ಥವಾಗಿ ಬಳಸಿಕೊಂಡು ವಾಚು ವಿತರಿಸಲು ಮುಂದಾಗಿದ್ದು, ಗೊಂದಲ ಗಲಭೆಗೆ ಕಾರಣವಾಯಿತು.












Click it and Unblock the Notifications