ಹೊಟೇಲು ತಿಂಡಿ ನಂಬಿಕೊಂಡವರಿಗೆ ಭರ್ಜರಿ ಶಾಕ್

ಹಣ್ಣು, ತರಕಾರಿ, ಅನಿಲ, ಹಾಲು, ವಿದ್ಯುತ್, ನೀರು, ಸಾಗಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ದರಗಳು ಮಿತಿಮೀರಿರುವ ಹಿನ್ನೆಲೆಯಲ್ಲಿ ಕೂಡಲೆ ಅನ್ವಯವಾಗುವಂತೆ ತಿಂಡಿ ತಿನಿಸುಗಳ ದರವನ್ನು ಏರಿಸಿರುವುದಾಗಿ ಹೊಟೇಲುಗಳ ಸಂಘ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ದರ ಅನ್ವಯವಾಗುವ ಮೊದಲೇ ಜಯನಗರ 3ನೇ ಬ್ಲಾಕ್ ನಲ್ಲಿರುವ ಕಿಕ್ಕಿರಿದು ತುಂಬಿರುವ ಕೆಲ ದರ್ಶಿನಿಗಳು ಊಟಗಳ ದರವನ್ನು ಏರಿಸಿವೆ. ಯಾಕ್ಸಾರ್ ನಿನ್ನೆ ತಾನೆ ಮಿನಿ ಮೀಲ್ಸ್ 18 ರು. ಇದ್ದದ್ದು ಇಂದೇಕೆ 20 ರು. ಎಂದು ಕೇಳಿದ್ದಕ್ಕೆ ತಾತ್ಸಾರವೇ ಹೊಟೇಲಿ ಕ್ಯಾಶಿಯರ್ ನ ಉತ್ತರ. ಗತಿಯಿಲ್ಲದೆ ತುಟ್ಟಿಯಾಗಿರುವ ಈರುಳ್ಳಿಯಿಲ್ಲದ ತಿಳಿತಿಳಿ ಸಾಂಬಾರನ್ನು ಅನ್ನಕ್ಕೆ ಹಚ್ಚಿಕೊಂಡು ತಿನ್ನಬೇಕು.
ಕಾರ್ಮಿಕರ ವೇತನ, ಕಟ್ಟಡದ ಬಾಡಿಗೆ, ನಿರ್ವಹಣೆ ವಚ್ಚಗಳು ಏರಿರುವುದರಿಂದ ತಿಂಡಿ ತೀರ್ಥಗಳು ಬೆಲೆಯನ್ನು ಏರಿಸುವ ಸ್ವಾತಂತ್ರ್ಯವನ್ನು ಆಯಾ ಹೊಟೇಲು ಮಾಲಿಕರಿಗೆ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ವಾಸುದೇವ ಅಡಿಗ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸರಕಾರ ಕೂಡಲೆ ಬೆಲೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು, ಹೊಟೇಲನ್ನೇ ನಂಬಿರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದ್ದಾರೆ.
ಈಗಾಗಲೆ ಕೆಲ ದರ್ಶಿನಿಗಳಲ್ಲಿ ಮಸಾಲೆದೋಸೆಯಲ್ಲಿ ಸಂಗಾತಿಯಾಗಿ ಬರುತ್ತಿದ್ದ ಸಾಂಬಾರು ಕಾಣೆಯಾಗಿದೆ. ಬೇಡಿಕೊಂಡರೆ ಮಾತ್ರ ತಿಳಿ ಸಾಂಬಾರು, ಇಲ್ಲದಿದ್ದರೆ ಕಡಲೆಬೇಳೆ ಚಟ್ನಿ, ಆಲೂಗಡ್ಡೆ ಪಲ್ಯವೇ ಗತಿ. ಕೆಲ ಹೊಟೇಲುಗಳ ದರ ಏರಿಸದಿರಲು ನಿಶ್ಚಯಿಸಿದರೆ ಮಸಾಲೆದೋಸೆ, ಬೊಂಡಾ ಸೂಪ್, ಉದ್ದಿನ ವಡೆ, ದಹಿ ವಡೆ, ಪಕೋಡಗಳ ಗಾತ್ರದಲ್ಲಿ ಕುಗ್ಗಿದರೂ ಆಶ್ಚರ್ಯವಿಲ್ಲ.
ಓದುಗರೆ, ಈ ದರ ಏರಿಕೆಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ.
* ದರ ಏರಿಕೆಗೆ ನಿಮ್ಮ ಸಹಮತವಿದೆಯಾ?
* ದರ ಏರಿಸಿದರೂ ಉತ್ತಮ ಗುಣಮಟ್ಟದ ತಿಂಡಿ ನಿರೀಕ್ಷಿಸುವಿರಾ?
* ಹೊಟೇಲಿನ ಸಹವಾಸವೇ ಬೇಡವೆಂದು ಮನೆಯಿಂದ ಡಬ್ಬಿ ತರುವಿರಾ?
* ಅನ್ಯ ಮಾರ್ಗವೇ ಇಲ್ಲವೆಂದು ಕೇಳಿದ್ದಷ್ಟು ತೆತ್ತು ಬರುವಿರಾ?
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications