2ಜಿ ಸ್ಪೆಕ್ಟ್ರಂ ಹಗರಣ ತನಿಖೆಗೆ ಸಮಿತಿ ರಚನೆ

A Raja
ನವದೆಹಲಿ, ಡಿ. 10 : 2 ಜಿ ಸ್ಪೆಕ್ಟ್ರಂ ಹಗರಣದಿಂದ ಕಂಗೆಟ್ಟಿದ್ದ ಯುಪಿಎ ಸರಕಾರ ಇದೀಗ ಎನ್ ಡಿಎ ಅವಧಿಯಲ್ಲಿನ ಅಕ್ರಮಗಳನ್ನು ಹೊರಹಾಕಲು ಮುಂದಾಗಿದೆ. ಈ ನಿಟ್ಟಿನಲ್ಲಿ ತನಿಖೆಗೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ನೇಮಿಸಿದೆ. ಶಿವರಾಜ್ ಪಾಟೀಲ್ ಕರ್ನಾಟಕದ ರಾಯಚೂರಿನವರು ಎನ್ನುವುದು ವಿಶೇಷವಾಗಿದೆ.

2001 ರಿಂದ ಎನ್ ಡಿಎ ಅವಧಿಯಲ್ಲಿ ನಡೆದ ತರಂಗಗುಚ್ಛ ಹಂಚಿಕೆ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ಮಧ್ಯೆ ಏಕಸದಸ್ಯ ಪೀಠ ರಚಿಸಿರುವ ಸರಕಾರ 2001 ರಿಂದ 2009ರವರೆಗೆ ತರಂಗಗುಚ್ಛ ಹಂಚಿಕೆ ನೀತಿ ಮತ್ತು ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಲು ಸೂಚಿಸಿದೆ. ಕೇಂದ್ರ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಈ ವಿಷಯವನ್ನು ಗುರುವಾರ ಪ್ರಕಟಿಸಿದ್ದಾರೆ.

ನಾಲ್ಕು ವಾರದೊಳಗೆ ಏಕದಸದಸ್ಯ ಪೀಠ ತನಿಖೆಯನ್ನು ಪೂರ್ಣಗೊಳಿಸಲಿದೆ. ಮಾಜಿ ಟೆಲಿಕಾಂ ಸಚಿವ ಎ ರಾಜಾ ವಿತರಿಸಿದ 122 ಪರವಾನಿಗಳು ಮಾತ್ರವಲ್ಲದೇ ಹಿಂದಿನ ಎಲ್ಲ ಪ್ರಕ್ರಿಯೆಗಳ ಬಗ್ಗೆಯೂ ಸರಕಾರಕ್ಕೆ ಮಾಹಿತಿ ದೊರೆಯಲಿದೆ. 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ರಾಜ್ಯ ರಾಜೀವ ಚಂದ್ರಶೇಖರ್ ಉದ್ಯಮಿ ರತನ್ ಟಾಟಾ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಈ ಹಗರಣದ ಹಿನ್ನೆಲೆಯಲ್ಲಿ ಈ ಇಬ್ಬರಿಗೂ ಪತ್ರಗಳ ಮೂಲಕ ಆರೋಪ ಪ್ರತ್ಯಾರೋಪಗಳು ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+