2ಜಿ ಸ್ಪೆಕ್ಟ್ರಂ ಹಗರಣ ತನಿಖೆಗೆ ಸಮಿತಿ ರಚನೆ

2001 ರಿಂದ ಎನ್ ಡಿಎ ಅವಧಿಯಲ್ಲಿ ನಡೆದ ತರಂಗಗುಚ್ಛ ಹಂಚಿಕೆ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ಮಧ್ಯೆ ಏಕಸದಸ್ಯ ಪೀಠ ರಚಿಸಿರುವ ಸರಕಾರ 2001 ರಿಂದ 2009ರವರೆಗೆ ತರಂಗಗುಚ್ಛ ಹಂಚಿಕೆ ನೀತಿ ಮತ್ತು ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಲು ಸೂಚಿಸಿದೆ. ಕೇಂದ್ರ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಈ ವಿಷಯವನ್ನು ಗುರುವಾರ ಪ್ರಕಟಿಸಿದ್ದಾರೆ.
ನಾಲ್ಕು ವಾರದೊಳಗೆ ಏಕದಸದಸ್ಯ ಪೀಠ ತನಿಖೆಯನ್ನು ಪೂರ್ಣಗೊಳಿಸಲಿದೆ. ಮಾಜಿ ಟೆಲಿಕಾಂ ಸಚಿವ ಎ ರಾಜಾ ವಿತರಿಸಿದ 122 ಪರವಾನಿಗಳು ಮಾತ್ರವಲ್ಲದೇ ಹಿಂದಿನ ಎಲ್ಲ ಪ್ರಕ್ರಿಯೆಗಳ ಬಗ್ಗೆಯೂ ಸರಕಾರಕ್ಕೆ ಮಾಹಿತಿ ದೊರೆಯಲಿದೆ. 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ರಾಜ್ಯ ರಾಜೀವ ಚಂದ್ರಶೇಖರ್ ಉದ್ಯಮಿ ರತನ್ ಟಾಟಾ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಈ ಹಗರಣದ ಹಿನ್ನೆಲೆಯಲ್ಲಿ ಈ ಇಬ್ಬರಿಗೂ ಪತ್ರಗಳ ಮೂಲಕ ಆರೋಪ ಪ್ರತ್ಯಾರೋಪಗಳು ನಡೆದಿವೆ.












Click it and Unblock the Notifications