ಚಿತ್ರದುರ್ಗ ಐಐಎಸ್ಸಿ ಕ್ಯಾಂಪಸ್ಸಿಗೆ 2 ಕೋಟಿ ರು.
ವಿಜ್ಞಾನ ನಗರಿ ಎಂದು ಮಾರ್ಪಾಡಾಗುತ್ತಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಈ ಪ್ರಯೋಜನಕ್ಕೆ ಬಾರದಿದ್ದ ಜಮೀನಿನಲ್ಲಿನ 32 ಕಟ್ಟಡಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಬಿಟ್ಟುಕೊಡಲಾಗಿದೆ. ಮತ್ತು 2 ಕೋಟಿ ರು. ಹಣವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಅಗತ್ಯಗಳಿಗೆ ತಕ್ಕಂತೆ ಕಟ್ಟಡಗಳನ್ನು ಮಾರ್ಪಾಡುಪಡಿಸಲು ಅನುದಾನ ನೀಡಲಾಗಿದೆ. ಇದಲ್ಲದೆ ಐಐಎಸ್ ಸಿ ಕ್ಯಾಂಪಸ್ ಗಾಗಿ ಸುಮಾರು 1500 ಎಕರೆ ಜಮೀನನ್ನು ನೀಡಲಾಗಿದೆ.
ಇದು ಸಾಧ್ಯವಾದದ್ದು ಸ್ವತಃ ಸಾಫ್ಟ್ ವೇರ್ ಇಂಜಿನಿಯರಾಗಿದ್ದ ಚಿತ್ರದುರ್ಗದ ಸಂಸದ ಜನಾರ್ಧನ ಸ್ವಾಮಿ ಅವರು ಸತತ ಪ್ರಯತ್ನದಿಂದ. ಅವರಿಗೆ ಹೆಗಲು ನೀಡಿದವರು ಐಐಎಸ್ ಸಿಯ ವಿಶೇಷ ಅಧಿಕಾರಿಯಾಗಿರುವ ಎಚ್ಎಸ್ ಜಗದೀಶ್ ಅವರ ಕಾರ್ಯತತ್ಪರತೆಯಿಂದ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನ ಶಿಕ್ಷಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಚಳ್ಳಕೆರೆ ಐಐಎಸ್ಸಿ ಕ್ಯಾಂಪಸ್ಸಿನಲ್ಲಿ ಇಂಟೆನ್ಸೀವ್ ಟ್ಯಾಲೆಂಟ್ ಡೆವಲಪ್ಮೆಂಟ್ ಸೆಂಟರ್ ಆರಂಭಿಸಲಾಗುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮ 2011ರ ಫೆಬ್ರವರಿಯಲ್ಲಿ ಆರಂಭವಾಗುತ್ತಿದೆ ಎಂದು ಎಚ್ಎಸ್ ಜಗದೀಶ್ ಹೇಳಿದ್ದಾರೆ.