ಕೃಷ್ಣಾವತಾರಕ್ಕೆ ಪೇಜಾವರರಿಂದ ಎಳ್ಳು ನೀರು: ಗೌಡ

HD Devegoda condemns Pejawar seer
ಬೆಂಗಳೂರು, ನ. 26 : ಬಿಜೆಪಿ ಎನ್ನುವುದು ಕೌರವ ಕುಟುಂಬ ಇದ್ದ ಹಾಗೆ. ಧರ್ಮಸಂಸ್ಥಾಪನೆಗೆ ಭಗವಾನ್ ಶ್ರೀಕೃಷ್ಣ ಅವತಾರ ಎತ್ತಿದ್ದು ಎಂದು ನಮ್ಮೆಲ್ಲರ ನಂಬಿಕೆ. ಆದರೆ ಉಡುಪಿ ಶ್ರೀಕೃಷ್ಣ ಮಠದ ಸ್ವಾಮೀಜಿ ಭ್ರಷ್ಟ ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಮುಂದುವರಿಸಲು ವಕಾಲತ್ತು ವಹಿಸಿ ಶ್ರೀಕೃಷ್ಣ ಪರಮಾತ್ಮನ ಅವತಾರದ ಉದ್ದೇಶಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಅಲ್ಲದೆ ಆ ಪೀಠದ ಪರಂಪರೆಗೆ ಕಳಂಕ ತಂದಿದ್ದಾರೆಂದು ಮಾಜಿ ಪ್ರಧಾನಿ ದೇವೇಗೌಡ ಪೇಜಾವರ ಮಠಾಧೀಶರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಧಾರ್ಮಿಕ ಭಾವನೆಯಲ್ಲಿ ನಮಗೂ ನಂಬಿಕೆ ಇದೆ. ನಾವು ದೇವರು, ಮಠ ಮಾನ್ಯತೆಗೆ ಬೆಲೆ ನೀಡುತ್ತೇವೆ. ಸ್ವಾಮೀಜಿಗಳು ನೀಡುವ ಹೇಳಿಕೆ ಮತ್ತು ಇಡುವ ಹೆಜ್ಜೆ ಜನತೆಗೆ ಮಾದರಿಯಾಗಿರಬೇಕೇ ಹೊರತು ಇವರು ರಾಜಕೀಯ ಮಾಡಬಾರದು. ಅಷ್ಟೇ ಅಲ್ಲದೆ, ಪೇಜಾವರ ಶ್ರೀಗಳು ವಕೀಲಗಿರಿ ಮಾಡಕ್ಕೆ ಹೊರಟಿದ್ದು ಕಳಂಕಿತ ಮುಖ್ಯಮಂತ್ರಿಯ ಮೇಲೆ. ಪೇಜಾವರ ಶ್ರೀಗಳ ಈ ನಡೆಗೆ ನಮ್ಮ ವಿರೋಧವಿದೆ ಎಂದು ದೇವೇಗೌಡ ಹೇಳಿದ್ದಾರೆ.

ಅಡ್ವಾಣಿ ಭೀಷ್ಮನಂತೆ: ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಸಮಯದಲ್ಲಿ ಭೀಷ್ಮ ಪಿತಾಮಹ ತುಂಬಿದ ಸಭೆಯಲ್ಲಿ ಅಸಾಹಯಕನಾಗಿ ಕೂರುತ್ತಾರೆ. ಯಡಿಯೂರಪ್ಪ ವಿಷಯದಲ್ಲಿ ಬಿಜೆಪಿ ಹಿರಿಯ ಧುರೀಣ ಆಡ್ವಾಣಿ ಅವರ ಪರಿಸ್ಥಿತಿ ಹಾಗೇ ಆಗಿದೆ. ಹೈಕಮಾಂಡ್ ಆದೇಶಕ್ಕೆ ತಲೆಬಾಗದ ಮುಖ್ಯಮಂತ್ರಿಯ ತಲೆದಂಡ ಮಾಡದೇ ಇರುವುದು ದುರದೃಷ್ಟಕರ ಎಂದು ದೇವೇಗೌಡ ಲೇವಡಿ ಮಾಡಿದ್ದಾರೆ.

ಸ್ಪೆಕ್ಟ್ರಂ ಹಗರಣದ ವೇಳೆ ಲೋಕಸಭೆಯಲ್ಲಿ ಗದ್ದಲದ ಕಾರಣ ಕಲಾಪ ಮುಂದೂಡಿದಾಗ ನಾನು ಅಲ್ಲೇ ಕೂತಿದ್ದೆ. ನನ್ನ ಸೋದರಿಯಂತಿರುವ ಸುಷ್ಮಾ ಸ್ವರಾಜ್ ಅಚ್ಚ ಕನ್ನಡದಲ್ಲಿ ನಿಮ್ಮ ಆರೋಗ್ಯ ಹೇಗಿದೆ ಎಂದು ವಿಚಾರಿಸುತ್ತಾ ಹತ್ತಿರ ಬಂದರು. ನನ್ನ ಆರೋಗ ಹಾಗಿರಲಿ ನನ್ನ ರಾಜ್ಯದ ಆರೋಗ್ಯ ಹದೆಗೆಡುವ ಮುನ್ನ ಯಡಿಯೂರಪ್ಪ ಅವರನ್ನು ಬದಲಿಸಿ ಎಂದು ಹೇಳಿದ್ದಾಗಿ ದೇವೇಗೌಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+