ಭೂಹಗರಣ ಸರ್ಕಾರಿ ಆದೇಶಕ್ಕೆ ಲೋಕಾಯುಕ್ತರ ಆಕ್ಷೇಪ

ಮಂಗಳವಾರ ಲೋಕಾಯುಕ್ತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ಪ್ರಕರಣದ ಬಗ್ಗೆ ಎರಡೆರಡು ತನಿಖೆಗಳ ಅಗತ್ಯವಿಲ್ಲ. ಭೂ ಹಗರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಲೋಕಾಯುಕ್ತ ಇಲಾಖೆ ತನಿಖೆ ಕೈಗೊಂಡಿದೆ. ಆದರೆ, ಇದೇ ಸಂದರ್ಭದಲ್ಲಿ ತಮಗೆ ಯಾವುದೇ ಮಾಹಿತಿ ನೀಡದೆ ಮತ್ತೊಂದು ತನಿಖೆ ಅಗತ್ಯವಿದೆಯೇ? ಎಂಬ ಕುರಿತು ಕಾನೂನು ಪರಾಮರ್ಶೆ ಅಗತ್ಯ ಎಂದರು.
ರಾಜ್ಯ ಸರಕಾರ ತನ್ನ ಅಭಿಪ್ರಾಯ ಕೇಳಿದ್ದರೆ ತಮ್ಮ ಬಳಿ ಇದ್ದ ಪ್ರಕರಣವನ್ನು ವರ್ಗಾವಣೆ ಮಾಡಬಹುದಿತ್ತು. ಇಲ್ಲವಾದರೆ ಲೋಕಾಯುಕ್ತ ಇಲಾಖೆಯಿಂದಲೇ ಸಮಗ್ರ ತನಿಖೆ ನಡೆಸಬಹುದಿತ್ತು ಎಂದ ಹೆಗ್ಡೆ, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.












Click it and Unblock the Notifications