ಯಡ್ಡಿ ಪರ ಟೊಂಕ ಕಟ್ಟಿದ ವೀರಶೈವ ಮಠಾಧೀಶರು
ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನದಿಂದ ದೇವೇಗೌಡ ಮತ್ತು ಅವರ ಮಕ್ಕಳು ವಿಪರೀತ ಕಾಟ ಕೊಟ್ಟಿದ್ದಾರೆ. ಲಿಂಗಾಯಿತರೆಂದರೆ ಅವರಿಗೆ ಏಕೆ ಅಷ್ಟೊಂದು ಆಕ್ರೋಶವೂ ಗೊತ್ತಿಲ್ಲ. ಲಿಂಗಾಯಿತರ ಮೇಲೆ ಈ ಗೌಡರ ಕುಟುಂಬ ಹಿಂದಿನಿಂದಲೂ ಆಕ್ರಮಣ ಮಾಡುತ್ತಲೇ ಬಂದಿದೆ ಎಂದು ಕಿಡಿಕಾರಿದರು.
ನಿಜಲಿಂಗಪ್ಪ, ಎಸ್ ಆರ್ ಬೊಮ್ಮಾಯಿ, ಜೆಎಸ್ ಪಟೇಲ್ ಅವರನ್ನು ಹೇಗೆಲ್ಲಾ ನಡೆಸಿಕೊಂಡರು ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ಪುತ್ರ ವ್ಯಾಮೋಹ ಯಾರಿಗಿಲ್ಲ. ತಪ್ಪು ನಡೆದಿದೆ ಎಂದರೆ ತನಿಖೆ ನಡೆಸಿ ತಪ್ಪಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ. ಬರೀ ಆರೋಪಕ್ಕೆ ರಾಜೀನಾಮೆ ಪಡೆಯುವುದು ಎಲ್ಲಿಯ ನ್ಯಾಯ. ಇದು ಲಿಂಗಾಯಿತರ ವಿರುದ್ಧ ನಡೆಸುತ್ತಿರುವ ಸಂಚಲ್ಲವೇ? ಪಿತೂರಿಯಲ್ಲವೇ ಎಂದು ದಯಾನಂದ ಶ್ರೀಗಳು ಪ್ರಶ್ನಿಸಿದರು.
ಭ್ರಷ್ಟಾಚಾರ ಮಾಡುವುದು ತಪ್ಪು. ಇದನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ಪ್ರಶ್ನೆ ಅದಲ್ಲ. ಅಧಿಕಾರ ಬಂದಾಗಿನಿಂದಲೂ ಒಂದು ದಿನವೂ ಅಧಿಕಾರ ಮಾಡಲು ಬಿಡಲಿಲ್ಲ. ಇದು ಸರಿಯೇ? ದೇವೇಗೌಡರ ಕುಟುಂಬ ಪರೋಕ್ಷವಾಗಿ ಲಿಂಗಾಯಿತರ ಮೇಲೆ ಆಕ್ರಮಣ ನಡೆಸಿದ್ದಾರೆ ಎಂದು ದಯಾನಂದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನ ಲಿಂಗಾಯಿತ ಸಮಾಜ ಖಂಡಿಸುತ್ತದೆ ಎಂದರು.