ಬಡವರ ಅಕ್ಕಿ ಕದಿಯುವ ಕಳ್ಳರ ಮೇಲೆ ಡಿಸಿ ದಾಳಿ

ಬಂಕಾಪುರ ಚೌಕ ಹತ್ತಿರವಿರುವ ಮಂಜುನಾಥ ಹರ್ಲಾಪುರ ಎಂಬವರಿಗೆ ಸೇರಿದ ರಾಚೋಟೇಶ್ವರ ಟ್ರೇಡರ್ಸ್ ಗೋದಾಮಿನ ಮೇಲೆ ಈ ದಾಳಿ ನಡೆದಿದೆ. ರಾಚೋಟೇಶ್ವರ ಟ್ರೇಡರ್ಸ್ ಗೋದಾಮಿಗೆ ಗವರ್ನ್ಮೆಂಟ್ ಆಫ್ ಪಂಜಾಬ್ ಎಂಬ ಹೆಸರಿನ ಚೀಲಗಳಲ್ಲಿ ಅಕ್ಕಿ, ಗೋಧಿಯನ್ನು ತುಂಬಿ ವಿವಿಧೆಡೆ ಕಳಿಸಲಾಗುತ್ತಿತ್ತು. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜೈನ್ ತಿಳಿಸಿದರು.
50 ಕಿಲೋ ತೂಕದ ಅಕ್ಕಿ ಚೀಲಗಳನ್ನು ಮಂಗಳೂರಿಗೆ ಸಾಗಿಸಲು ಹೊರಟ್ಟಿದ್ದ ಲಾರಿಯೊಂದನ್ನು ವಶಪಡಿಸಿಕೊಂಡು, ಚಾಲಕ ಅಬ್ದುಲ್ ಕರೀಂ ಶೇಖ್ನನ್ನು ಬಂಧಿಸಲಾಗಿದೆ ಎಂದರು. ದಾಳಿಯ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ಎಸ್. ಬಿರಾದಾರ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಹಾಜರಿದ್ದರು.











Click it and Unblock the Notifications