ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಥ ಭ್ರಷ್ಟ ಸರಕಾರ ನಾನೆಂದೂ ಕಂಡಿಲ್ಲ, ನ್ಯಾ. ಹೆಗ್ಡೆ

By Mrutyunjaya Kalmat
|
Google Oneindia Kannada News

Santosh Hegde
ಸುಳ್ಯ, ನ. 19 : ಹಗರಣಗಳು ಹನುಮಂತನ ಬಾಲದಂತೆ ಸಾಗುತ್ತಲೇ ಇದೆ. ಭವಿಷ್ಯದ ಬಗ್ಗೆ ಕನಸು ಕಂಡಾಗ ಪ್ರತಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ಮತ್ತು ಅನ್ಯಾಯದ ದರ್ಶನವಾಗುತ್ತಿದೆ. ಇಷ್ಟೊಂದು ಅನ್ಯಾಯ, ಅನೈತಿಕ ಮತ್ತು ಭ್ರಷ್ಟ ಸರಕಾರವನ್ನು ನಾನೆಂದೂ ಕಂಡಿಲ್ಲ ಎಂದು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ವಿಷಾದವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾತನಾಡುತ್ತಿದ್ದ ಹೆಗ್ಡೆ, ಭ್ರಷ್ಟಾಚಾರದ ಬಲೆಗೆ ಎಂದೂ ಬೀಳಬೇಡಿ. ಭ್ರಷ್ಟ ಅಧಿಕಾರಿ, ಜನಪ್ರತಿನಿಧಿಗಳನ್ನು ಬಹಿಷ್ಕರಿಸಿ, ಸಮಾಜ ಸಮುದಾಯದ ಕಾರ್ಯಕ್ರಮದಿಂದಲೂ ಅವರನ್ನು ದೂರವಿಡಿ ಎಂದು ಭ್ರಷ್ಟಾಚಾರ ವಿರೋಧಿ ಅರಿವು-ಆಂದೋಲನ ವಿದ್ಯಾರ್ಥಿ ಮತ್ತು ಸಾರ್ವಜನಿಕ ಸಂವಾದಲ್ಲಿ ಮಾತನಾಡುತ್ತಾ ಕರೆ ನೀಡಿದ್ದಾರೆ.

ಚುನಾವಣೆಯಲ್ಲಿ ಗೆದ್ದು ಬರುವ ರಾಜಕಾರಿಣಿಗಳಿಗೆ ಆ ಹಣ ದೊಡ್ಡ ಇನ್ವೆಸ್ಟ್ ಮೆಂಟ್ ಇದ್ದ ಹಾಗೆ. ಗೆದ್ದ ನಂತರ ಅದಕ್ಕೆ ಡಿವಿಡೆಂಡ್ ಮಾತ್ರವಲ್ಲ ಚಕ್ರಬಡ್ಡಿಯನ್ನೂ ಪಡೆಯುತ್ತಾರೆ. ಇಂಥವರನ್ನು ಆರಿಸುವಾಗ ಗಮನಿಸಿ ಮತ ನೀಡಿ ಎಂದು ನ್ಯಾ. ಹೆಗ್ಡೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X