ಇಂಥ ಭ್ರಷ್ಟ ಸರಕಾರ ನಾನೆಂದೂ ಕಂಡಿಲ್ಲ, ನ್ಯಾ. ಹೆಗ್ಡೆ

ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾತನಾಡುತ್ತಿದ್ದ ಹೆಗ್ಡೆ, ಭ್ರಷ್ಟಾಚಾರದ ಬಲೆಗೆ ಎಂದೂ ಬೀಳಬೇಡಿ. ಭ್ರಷ್ಟ ಅಧಿಕಾರಿ, ಜನಪ್ರತಿನಿಧಿಗಳನ್ನು ಬಹಿಷ್ಕರಿಸಿ, ಸಮಾಜ ಸಮುದಾಯದ ಕಾರ್ಯಕ್ರಮದಿಂದಲೂ ಅವರನ್ನು ದೂರವಿಡಿ ಎಂದು ಭ್ರಷ್ಟಾಚಾರ ವಿರೋಧಿ ಅರಿವು-ಆಂದೋಲನ ವಿದ್ಯಾರ್ಥಿ ಮತ್ತು ಸಾರ್ವಜನಿಕ ಸಂವಾದಲ್ಲಿ ಮಾತನಾಡುತ್ತಾ ಕರೆ ನೀಡಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಬರುವ ರಾಜಕಾರಿಣಿಗಳಿಗೆ ಆ ಹಣ ದೊಡ್ಡ ಇನ್ವೆಸ್ಟ್ ಮೆಂಟ್ ಇದ್ದ ಹಾಗೆ. ಗೆದ್ದ ನಂತರ ಅದಕ್ಕೆ ಡಿವಿಡೆಂಡ್ ಮಾತ್ರವಲ್ಲ ಚಕ್ರಬಡ್ಡಿಯನ್ನೂ ಪಡೆಯುತ್ತಾರೆ. ಇಂಥವರನ್ನು ಆರಿಸುವಾಗ ಗಮನಿಸಿ ಮತ ನೀಡಿ ಎಂದು ನ್ಯಾ. ಹೆಗ್ಡೆ ಹೇಳಿಕೆ ನೀಡಿದ್ದಾರೆ.












Click it and Unblock the Notifications