ಪತ್ನಿ ಹತ್ಯೆಗೆ ಜೀವಾವಧಿ ಅಲ್ಲ ಗಲ್ಲು ಶಿಕ್ಷೆ ಉಚಿತ!

ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ಜ್ಞಾನಸುಧಾ ಮಿಶ್ರ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, ಇಂತಹ ಘಟನೆಗಳು ಸಾಮಾಜಿಕ ಅಪರಾಧಗಳಾಗಿದ್ದು, ಇವು ಸಮಾಜದ ಸ್ವಾಸ್ಥವನ್ನೇ ಹಾಳುಮಾಡುತ್ತವೆ. ಇಂತಹ ಕೃತ್ಯಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕಿದೆ. ಆದರೂ ಈ ಪ್ರಕರಣದಲ್ಲಿ ಆರೋಪಿಯು ತನ್ನ ವಾದವನ್ನು ಮಂಡಿಸುವ ಸ್ವಾತಂತ್ರವನ್ನು ಹೊಂದಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿರುವುದರಿಂದ ನಮ್ಮ ದೃಷ್ಟಿಯಲ್ಲಿ ಇಂತಹ ಕೃತ್ಯವೆಸಗಿರುವ ಈತನಿಗೆ ಗರಿಷ್ಠ ಪ್ರಮಾಣದ ಗಲ್ಲು ಶಿಕ್ಷೆಯನ್ನು ವಿಧಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ಪಂಜಾಬ್ ಮೂಲದ ಸುಖದೇವ್ ಸಿಂಗ್ ತನ್ನ ಹೆಂಡತಿ ದಲ್ಜಿತ್ ಕೌರ್ ಳನ್ನು ಅಮಾನುಷವಾಗಿ ಹತ್ಯೆಗೈದು ನಂತರ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.












Click it and Unblock the Notifications