ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು : ಮತಾಂತರಕ್ಕೆ ಯತ್ನ, ಕರವೇ ದಾಳಿ
ಮಂಡ್ಯ, ಕೆ ಆರ್ ಪೇಟೆ, ಚಿಕ್ಕಮಗಳೂರು, ಮೈಸೂರು ಮುಂತಾದ ಕಡೆಯಿಂದ ಆಗಮಿಸಿದ್ದ ಯುವಕ ಯುವತಿಯರನ್ನು ಮತಾಂತರಿಸಲಾಗುತ್ತಿತ್ತು. ಇದಕ್ಕಾಗಿ ಇಲ್ಲಿ ಅವರಿಗೆ ಕ್ರೈಸ್ತ ಧರ್ಮದ ವಿಶೇಷ ತರಬೇತಿ ವ್ಯವಸ್ಥೆ ಮಾಡಲಾಗಿತ್ತು. ವಿಷಯ ತಿಳಿದ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಯುವಕ ಯುವತಿಯರ ಕುಟುಂಬ ವರ್ಗದವರ ಜೊತೆಗೆ ಮತಾಂತರ ಕೇಂದ್ರದ ಮೇಲೆ ದಾಳಿ ನಡೆಸಿದರು.
ದಾಳಿ ವೇಳೆ ಕ್ರೈಸ್ತ ಧರ್ಮದ ವಿರುದ್ದ ಘೋಷಣೆಗಳನ್ನು ಕೂಗಿ, ಅವರನ್ನು ಕೇಂದ್ರದಿಂದ ಹೊರಬಿಡದೆ ಕೆಲಕಾಲ ದಿಗ್ಬಂಧನೆ ವಿಧಿಸಿದರು. ಈ ಸಂದರ್ಭದಲ್ಲಿ ಕೆಲವರು ನಮ್ಮನ್ನು ಯಾರೂ ಬಲವಂತದಿಂದ ಮತಾಂತರ ಮಾಡುತ್ತಿಲ್ಲ, ನಾವೇ ಸ್ವಯಂ ಪ್ರೇರಿತರಾಗಿ ಬಂದಿದ್ದೇವೆ ಎಂದು ಸಮರ್ಥಿಸಿಕೊಂಡರು. ಮೇಟಗಲ್ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ಶಾಂತಿಪಾಲ್ ಎನ್ನುವವನನ್ನು ಸೇರಿ ಮೂವರನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.
Comments
ಕರವೇ ಮತಾಂತರ ಕ್ರೈಸ್ತ ಧರ್ಮ ಮೈಸೂರು ಪ್ರವೀಣ್ ಶೆಟ್ಟಿ ಕೆಆರ್ ಪೇಟೆ ಮಂಡ್ಯ ಪ್ರತಿಭಟನೆ karave conversion jesus christ mysore praveen shetty kr pet mandya protest
English summary
Karnataka Rakshana Vedike activists attack on conversion centre in Durgeshwari Kalyana Mantap of KHB Colony in outskirts of Mysore City
Story first published: Saturday, November 13, 2010, 11:30 [IST]