ಚಿಂದಿ ಆಯುವವನ ತಲೆ ಚೆಂಡಾಡಿದ ದುಷ್ಕರ್ಮಿಗಳು

ಭಕ್ಷಿಗಾರ್ಡ್ನ ಅಂಗಡಿಯೊಂದರ ಬಳಿ ಬುಧವಾರ ರಾತ್ರಿ ಚಿಂದಿ ಹಾಯುವ ಅಕ್ರಂ ಅಲಿಯಾಸ್ ಸಲೀಮ್ (29) ಹಾಗೂ ಆತನ ಪತ್ನಿ ಭವಾನಿ ಮಲಗಿದ್ದರು. ತಡರಾತ್ರಿ ವೇಳೆ ಕೆಲ ದುಷ್ಕರ್ಮಿಗಳು ಕುಡಿದ ಅಮಲಿನಲ್ಲಿ ಬಂದು ಭವಾನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದನ್ನು ತಡೆಯಲು ಹೋದ ಅಕ್ರಂನನ್ನು ಕಲ್ಲಿನಿಂದ ಜಜ್ಜಿದ್ದಾರೆ,ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ನಂತರ ಭವಾನಿ ಮೇಲೆ ಅತ್ಯಾಚಾರದ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಭವಾನಿಯನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications