ತಾಯಿ ಆಣೆಗೂ ಪಕ್ಷಕ್ಕೆ ದ್ರೋಹ ಬಗೆದಿಲ್ಲ :ರೇಣುಕಾ

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯಾವ ಭಗವಂತನ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಬಂಡಾಯ ಶಾಸಕರೊಂದಿಗೆ ಚೆನ್ನೈ, ಗೋವಾ ದಲ್ಲಿದ್ದದ್ದು, ಕೇವಲ ಅವರ ಮನಪರಿವರ್ತಿಸಿ, ಅವರನ್ನು ಮತ್ತೆ ಸರಕಾರದೊಂದಿಗೆ ಕರೆತರುವ ಉದ್ದೇಶಕ್ಕಾಗಿ ನಾನು ಅವರ ಜೊತೆಗೆ ಹೋಗಿದ್ದೆ
ಆದರೆ, ರಾಜ್ಯಪಾಲರಿಗೆ ಬೆಂಬಲ ವಾಪಾಸ್ ಪತ್ರ ನೀಡಿದ್ದೇಕೆ ಎಂದು ಪ್ರಶ್ನಿಸಿದಾಗ, ಕೊಂಚ ತಬ್ಬಿಬ್ಬಾದ ರೇಣುಕಾಚಾರ್ಯ, ಸಹಿ ಹಾಕಿದ್ದು ನಾನೇ, ಆದರೆ, ಬೇಳೂರು ಸೇರಿದಂತೆ ನಮ್ಮ ಸ್ನೇಹಿತರ ಒತ್ತಡಕ್ಕೆ ಮಣಿದು ಪತ್ರಕ್ಕೆ ಸಹಿ ಹಾಕಿದೆ ಅಷ್ಟೇ. ನನಗೆ ಅದು ರಾಜ್ಯಪಾಲರಿಗೆ ನೀಡುವ ಪತ್ರ ಎಂದು ತನಗೆ ಗೊತ್ತಿರಲಿಲ್ಲ ಎಂದು ಅಮಾಯಕತ್ವದ ಪ್ರದರ್ಶನ ಮಾಡಿದರು.
ಆದರೆ, ಮಾಧ್ಯಮದವರ ಪ್ರಶ್ನೆಗಳ ಸುರಿಮಳೆ ತಾಳಲಾರದೆ, ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮುಗಿಸಿ ಎದ್ದ ಸಚಿವರ ಮೇಲೆ ಸುದ್ದಿಗಾರರಿಗೇನು ಮುನಿಸಾಗಲಿಲ್ಲ. ಕಾರಣ, ಹೊನ್ನಾಳಿ ವೀರನ ನುಡಿಮುತ್ತುಗಳು ಅದೇ ಹಳೆ ಗ್ರಾಮಾಫೋನ್ ರೆಕಾರ್ಡ್ ನಂತೆ ಸುತ್ತುತ್ತಲೇ ಇತ್ತು.
ವಿಡಿಯೋಗಳು: ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಸಾಂಗ್ ಪಾಲಿಟಿಕ್ಸ್ ಮಿಕ್ಸ್ |
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ| ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications