ರಾಜಕೀಯ ಅರಾಜಕತೆಗೆ ಕೊನೆ ಎಂದು?

ಅಲ್ಪಮತವನ್ನು ಬಹುಮತವಾಗಿ ಪರಿವರ್ತನೆ ಮಾಡಿಕೊಳ್ಳಲು ಚುನಾಯಿತ ಶಾಸಕರಿಂದ ರಾಜಿನಾಮೆ ಕೊಡಿಸಿ, ಮತ್ತೆ ಚುನಾವಣೆ ನಡೆಸಿ ಅವರನ್ನು ಗೆಲ್ಲಿಸಿ ತರುವುದಾಗಲೀ ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡಲು ವಿರೋಧ ಪಕ್ಷಗಳು ಯತ್ನಿಸುವುದಾಗಲೀ ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆಯೆಂಬುದು ಎಲ್ಲರಿಗೂ ಗೊತ್ತು. ಆದರೆ, ಸಂವಿಧಾನ, ಕಾನೂನುಗಳನ್ನು ಹೇಗೇ ತಿದ್ದಿ ತೀಡಿದರೂ ಅವುಗಳ ಆಶಯಕ್ಕೆ ವ್ಯತಿರಿಕ್ತವಾಗಿ ಸಾಗಿ ದಕ್ಕಿಸಿಕೊಳ್ಳುವ ಜಾಣ್ಮೆ ನಮ್ಮ ರಾಜಕೀಯ ನೇತಾರರಿಗಿದೆ. ಇದೇ ಜಾಣ್ಮೆಯನ್ನವರು ರಾಜ್ಯಾಡಳಿತದಲ್ಲಿ ತೋರಿದ್ದರೆ ರಾಜ್ಯದ ಮತ್ತು ಆ ನೇತಾರರ ಭವಿಷ್ಯ ಎರಡೂ ಹಸನಾಗುತ್ತಿದ್ದವು. ಅಷ್ಟು ವಿಶ್ವಾಸ ಮತ್ತು ತಾಳ್ಮೆ ನಮ್ಮ ನೇತಾರರಿಗಿಲ್ಲ. ಅವರ ಅತೀವ ದುಃಸ್ವಾರ್ಥ ಇದಕ್ಕೆ ಕಾರಣ.
ಹೀಗಿರುವಾಗ, ನಿಸ್ಪೃಹರನ್ನು, ಕನಿಷ್ಠಪಕ್ಷ ದುಃಸ್ವಾರ್ಥಿಗಳಲ್ಲದವರನ್ನು ಶಾಸನಸಭೆಗೆ ಆರಿಸಿ ಕಳಿಸುವುದೊಂದೇ ಇಂದಿನಂತಹ ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರ. ಹಣಬಲದಿಂದ ಚುನಾವಣೆಗಳನ್ನು ಗೆಲ್ಲುವ ಇಂದಿನ ದಿನಗಳಲ್ಲಿ ನಿಸ್ಪೃಹರ ಆಯ್ಕೆ ಅಸಾಧ್ಯವೆಂದು ಮೇಲ್ನೋಟಕ್ಕೆ ಕಂಡುಬಂದರೂ ಮತದಾರರಾದ ನಮ್ಮಲ್ಲಿ ತಕ್ಕ ಎಚ್ಚರ ಮೂಡಿದರೆ ಯೋಗ್ಯರ ಆಯ್ಕೆ ಅಸಾಧ್ಯವೇನಲ್ಲ.
ಮತದಾರರಾದ ನಾವು, ಮುಖ್ಯವಾಗಿ ವಿದ್ಯಾವಂತರು ಮತದಾನವನ್ನು ತಪ್ಪದೇ ಮಾಡಬೇಕು. ಆಗ ಕೆಲವಾದರೂ ಕ್ಷೇತ್ರಗಳಲ್ಲಿ ಅಯೋಗ್ಯರಿಗೆ ಹಿನ್ನಡೆಯಾಗುವುದು ನಿಶ್ಚಿತ. ಈ ಇತ್ಯಾತ್ಮಕ ಬೆಳವಣಿಗೆಯನ್ನು ಗಮನಿಸುವ ರಾಜಕೀಯ ಪಕ್ಷಗಳು ಕ್ರಮೇಣ ಯೋಗ್ಯ ಅಭ್ಯರ್ಥಿಗಳೆಡೆಗೆ ವಾಲುವುದು ಅನಿವಾರ್ಯವಾಗುತ್ತದೆ. ಪಕ್ಷೇತರನೇ ಯೋಗ್ಯನೆಂದಾದಲ್ಲಿ ಅವನನ್ನೇ ಗೆಲ್ಲಿಸುವ ಇಚ್ಛಾಶಕ್ತಿಯನ್ನು ಮತದಾರರು ಬೆಳೆಸಿಕೊಂಡಲ್ಲಿ ಇದು ಕ್ರಮೇಣ ರಾಜಕೀಯ ಪಕ್ಷಗಳ ಶುದ್ಧೀಕರಣಕ್ಕೆ ಬಲವಾದ ಪ್ರೇರಣೆಯಾದೀತು.
ವಿದ್ಯಾವಂತರಾದ ನಾವು ಬರಿದೆ ಮಾತಾಡುತ್ತೇವೆ. ಮತಗಟ್ಟೆಗೆ ಹೋಗಿ ಮತದಾನ ಮಾಡುವುದಿಲ್ಲ. ಬೆಂಗಳೂರಿನ ಅತಿ ಶ್ರೀಮಂತ ಮತ್ತು ವಿದ್ಯಾವಂತ ಮತದಾರರ ಏರಿಯಾದಲ್ಲಿ ಅತಿ ಕಡಿಮೆ ಪ್ರಮಾಣದ ಮತದಾನ ಆಗುತ್ತಿರುವುದು ಇದಕ್ಕೆ ಸಾಕ್ಷಿ. ಅಮಾಯಕ ಮತದಾರರ ಬಡತನ, ದೂರದೃಷ್ಟಿಯ ಕೊರತೆ, ಚಟಗಳು ಇವುಗಳನ್ನು ದುರುಪಯೋಗ ಪಡಿಸಿಕೊಂಡು ದುಡ್ಡು ಚೆಲ್ಲಿ ಚುನಾವಣೆ ಗೆಲ್ಲುವವರೇ ರಾಜಕೀಯ ಸಮಸ್ಯೆಗಳಿಗೆ ಕಾರಣರು. ಇಂತಹವರನ್ನು ಸೋಲಿಸಬೇಕೆಂದರೆ, ಬಡತನವೆಂಬ ಅಸಹಾಯಕತೆ ಆವರಿಸಿರದ, ದೂರದೃಷ್ಟಿಯುಳ್ಳ ಮತ್ತು ಚಟಗಳಿಗಾಗಿ ಧನಾಪೇಕ್ಷೆಯ ಅಗತ್ಯ ಹೊಂದಿರದ ಬಲ್ಲಿದ ವಿದ್ಯಾವಂತರೆಲ್ಲ ಮತಗಟ್ಟೆಗೆ ಹೋಗಿ ಮತ ಹಾಕಬೇಕು. ಇದಕ್ಕಾಗಿ ಮತದಾನವನ್ನು ಕಡ್ಡಾಯಗೊಳಿಸುವುದು ಅವಶ್ಯವೆಂದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ.
ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಇನ್ನೊಂದು ಕೆಲಸವೂ ಆಗಬೇಕು. ಅದೆಂದರೆ, ಎಳೆಯರಲ್ಲಿ ನೈತಿಕ ಮೌಲ್ಯಗಳನ್ನು ಸ್ಥಾಪಿಸುವ ಕೆಲಸ. ಪೋಷಕರು, ಶಿಕ್ಷಕರು ಮಾತ್ರವಲ್ಲ, ಇತರರೂ ಈ ಕೆಲಸ ಮಾಡಬಹುದು. ಲೋಕಾಯುಕ್ತ ಸಂತೋಷ ಹೆಗ್ಡೆಯವರು ಇದಕ್ಕೆ ಉದಾಹರಣೆ. ಶಿಕ್ಷಕನಲ್ಲದ ನಾನು ಶಾಲೆ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ನೈತಿಕತೆಯ ಅಗತ್ಯದ ಅರಿವುಂಟುಮಾಡುವ ಕಾರ್ಯವನ್ನು ವರ್ಷಗಳಿಂದ ಕೈಗೊಂಡಿದ್ದು ನನ್ನ ಪ್ರಯತ್ನಗಳು ಆಶಾದಾಯಕ ಫಲಿತಾಂಶವನ್ನು ನೀಡುತ್ತಿವೆ. ಇಂದಿನ ಎಳೆಯರಲ್ಲಿ ನೈತಿಕತೆಯ ಪ್ರಜ್ಞೆ ಮೂಡಿದರೆ ರಾಜಕೀಯ ರಂಗವೂ ಸೇರಿದಂತೆ ನಾಳೆಯ ಸಮಾಜ ಪರಿಶುದ್ಧ ಸಮಾಜವಾಗುವುದು ನಿಶ್ಚಿತ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications