Get Updates
Get notified of breaking news, exclusive insights, and must-see stories!

ಅತೃಪ್ತ ಶಾಸಕ ಶಂಕರಲಿಂಗೇಗೌಡ ತೀವ್ರ ಅಸ್ವಸ್ಥ

Shankarlinge Gowda
ಮೈಸೂರು, ಅ. 16 : ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ಯಡಿಯೂರಪ್ಪನವರ ವಿರುದ್ಧ ಸಿಡಿದೆದ್ದಿದ್ದ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಶಂಕರಲಿಂಗೇಗೌಡ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಹನ್ನೆರಡು ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡ ಕೂಡಲೆ ಅವರನ್ನು ವಿಕ್ರಂ ಜ್ಯೋತ್ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕಳೆದ ಹದಿನೈದು ದಿನಗಳಿಂದ ಎದೆಬಡಿತದಲ್ಲಿ ಕೂಡ ತೀವ್ರ ಏರುಪೇರು ಆಗುತ್ತಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಯಕೃತ್ತು ಕೂಡ ಹದಗೆಟ್ಟಿತ್ತು ಎಂದು ಹೇಳಲಾಗಿದೆ.

ಕಳೆದ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದ ಕಾರಣ ಬಿಜೆಪಿಯ ಹಿರಿಯ ಶಾಸಕ ಶಂಕರಲಿಂಗೇಗೌಡ ಅವರು ಬೀದಿಗೆ ಬಂದು ಯಡಿಯೂರಪ್ಪ ಮತ್ತು ಅವರ ಆಡಳಿತದ ವಿರುದ್ಧ ಕಿಡಿಕಾರಿದ್ದರು. ಸಂಪುಟದಲ್ಲಿ ಕಳ್ಳರಿಗೆ, ಸುಳ್ಳರಿಗೆ ಸ್ಥಾನ ಸಿಗುತ್ತದೆ, ಆದರೆ ತನ್ನಂಥ ಹಿರಿಯರಿಗೆ ಸ್ಥಾನ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಮೈಸೂರು ದಸರಾ ಉತ್ಸವದಲ್ಲಿ ಕೂಡ ಭಾಗವಹಿಸುವುದಿಲ್ಲ ಎಂದು ಕೆಂಡ ಕಾರಿದ್ದರು.

ಕೆಲ ದಿನಗಳ ನಂತರ ಯಡಿಯೂರಪ್ಪನವರ ವಿರುದ್ಧ ಭಿನ್ನಮತ ಸ್ಫೋಟಿಸಿದಾಗ ಭಿನ್ನಮತೀಯರೊಡನೆ ಕಾಣಿಸಿಕೊಂಡು ಶಂಕರಲಿಂಗೇಗೌಡರು ಇತರ 15 ಶಾಸಕರ ಜೊತೆ ಅನರ್ಹರಾಗಿದ್ದರು. ಅವರ ಅನರ್ಹತೆ ಪ್ರಶ್ನಿಸಿ ಹೂಡಲಾಗಿದ್ದ ರಿಟ್ ಅರ್ಜಿಯ ತೀರ್ಪು ಕರ್ನಾಟಕ ಹೈಕೋರ್ಟ್ ಪ್ರಕಟಿಸಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+