ಆಪರೇಷನ್ ಕಮಲಕ್ಕೆ ಎಂಸಿ ಆಶ್ವಥ್ ಬಲಿ

ಅಶ್ವತ್ಥ್ ಅವರ ಈ ಕ್ರಮ ಜೆಡಿಎಸ್ ವರಿಷ್ಠರ ತೀವ್ರ ಟೀಕೆಗೆ ಕಾರಣವಾಗಿದ್ದು, ಚನ್ನಪಟ್ಟಣದ ಜನತೆ ಈ ಬಗ್ಗೆ ತಕ್ಕಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ವಿಧಾನಸಭೆಯಲ್ಲಿ ಜೆಡಿಎಸ್ನ ಸಂಖ್ಯಾ ಬಲ 27ಕ್ಕೆ ಕುಸಿದಿದೆ. ಅಶ್ವತ್ಥ್ ರಾಜೀನಾಮೆ ಸಲ್ಲಿಸುವಾಗ ಕೆಲ ಬಿಜೆಪಿ ಮುಖಂಡರು ಜತೆಯಾಗಿದ್ದುದು, ತೀವ್ರ ಚರ್ಚೆಗೆ ಕಾರಣವಾಗಿದೆ. ಸಂಖ್ಯಾಬಲ ಅಲ್ಪಮತಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ಮೂಲಕ ಮತ್ತೆ 'ಆಪರೇಷನ್ ಕಮಲ"ಕ್ಕೆ ಚಾಲನೆ ನೀಡಿದೆ.
ಬಿಜೆಪಿಯ 11 ಅತೃಪ್ತರು ಹಾಗೂ ಐವರು ಪಕ್ಷೇತರ ಶಾಸಕರು ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಬಂಡೆದ್ದು, ಗೋವಾ ರೆಸಾರ್ಟ್ ಸೇರಿದ ಎರಡು ದಿನಗಳ ನಂತರ ಅಶ್ವತ್ಥ್ ಕ್ಷೇತ್ರದಿಂದ ಮಾಯವಾಗಿದ್ದರು. ಜೆಡಿಎಸ್ ವರಿಷ್ಠರ ಸಂಪರ್ಕಕ್ಕೂ ಸಿಗದ ಅವರು ಬಿಜೆಪಿಯ ಹಿರಿಯ ಮುಖಂಡರ ಜತೆ ಇದ್ದರು. ಸೋಮವಾರ ನಡೆದ ವಿಶ್ವಾಸಮತ ಯಾಚನೆಗೆ ಮುನ್ನ ಜೆಡಿಎಸ್ ಸಚೇತಕರು ಅಶ್ವತ್ಥ್ಗೆ ವಿಪ್ ಜಾರಿಗೊಳಿಸಿದ್ದರು. ಖುದ್ದಾಗಿ ಹಾಜರಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮತ ಚಲಾಯಿಸಬೇಕು, ಇಲ್ಲವಾದರೆ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿತ್ತು. ಆದರೆ, ಅಶ್ವತ್ಥ್ ಗೈರು ಹಾಜರಾಗಿದ್ದರು.












Click it and Unblock the Notifications