ಬಿಜೆಪಿ ಪ್ರಹಸನಕ್ಕೆ ದೇವೇಗೌಡ ರಂಗಪ್ರವೇಶ
ಬೆಂಗಳೂರು,
ಅ. 9 : ರಾಜ್ಯದ ಜನತೆಗೆ ಶಾಪವಾಗಿರುವ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಎಲ್ಲಾ ಪಕ್ಷಗಳು ಒಗ್ಗಟ್ಟಾಗ ಬೇಕು. ಎರಡು ವರ್ಷದ ಹಿಂದೆ ಕೂಡ ಈ ಮಾತನ್ನು ಹೇಳಿದ್ದೆ. ಯಡಿಯೂರಪ್ಪ ರಾಜ್ಯ ಕಂಡ ಒಬ್ಬ ಭ್ರಷ್ಟ ಮುಖ್ಯಮಂತ್ರಿ. ಬಿಜೆಪಿ ಸರಕಾರವನ್ನು ಉರುಳಿಸಲು ಕಾಂಗ್ರೆಸ್ ಜೊತೆ ಜೆಡಿಎಸ್ ಕೈ ಜೋಡಿಸಬೇನ್ನುವುದು ನನ್ನ ಬಯಕೆಯಲ್ಲ. ಒಟ್ಟಿನಲ್ಲಿ ನಾಡಿಗೆ ಕಂಟಕವಾಗಿರುವ ಈ ಸರಕಾರ ಪತನಗೊಳ್ಳಬೇಕೆಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳುವ ಮೂಲಕ ರಂಗಪ್ರವೇಶ ಮಾಡಿದ್ದಾರೆ. id="toptextpromo">ಪಕ್ಷದ
ಶಾಸಕರುಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದ ದೇವೇಗೌಡ, ಬಿಜೆಪಿಯನ್ನು ತೊಲಗಿಸಲು ಸಿಪಿಎಂ, ಸಿಪಿಐ ಮತ್ತು ರೈತಸಂಘಗಳು ಕೂಡ ಒಗ್ಗಟ್ಟಾಗ ಬೇಕು. ಸರಕಾರ ತೊಲಗಿದರೆ ಜನತೆಗೆ ಮುಕ್ತಿ ದೊರಕಿದಂತಾಗುತ್ತದೆ. ದೇವೇಗೌಡ ರಾಜ್ಯಕ್ಕೆ ಒಂದು ಶಾಪ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಾರೆ. ಆದರೆ ರಾಜ್ಯದ ಆರು ಕೋಟಿ ಜನತೆ ಎರಡು ವರ್ಷದಿಂದ ಅವರಿಗೆ ಶಾಪ ಹಾಕುತ್ತಿದ್ದಾರೆಂದು ಲೇವಡಿ ಮಾಡಿದರು. id='are-slot-1' class='oiad oi-axt oiadv'> id='top-searched-articles'>ಸ್ಪೀಕರ್
ದಾರಿ ತಪ್ಪಿಸಿ ಬಿಜೆಪಿಯ 11 ಭಿನ್ನಮತೀಯ ಶಾಸಕರಿಗೆ ನೋಟಿಸ್ ಜಾರಿ ಮಾಡಿಸಿದ್ದಾರೆ. ಗೌರವಯುತವಾದ ಸ್ಪೀಕರ್ ಪೀಠದಿಂದ ಮುಖ್ಯಮಂತ್ರಿಗಳು ತಪ್ಪು ಮಾಡಿಸಲು ಹೊರಟಿರುವುದು ನೋವಿನ ವಿಷಯ. ಆಪರೇಷನ್ ಕಮಲದ ಮೂಲಕ ಶಾಸಕರ ಖರೀದಿ ಆರಂಭಿಸಿ ಅಶ್ಲೀಲ ರಾಜಕಾರಣ ನಡೆಸಿದ ಫಲಈಗ ಬಿಜೆಪಿ ಅನುಭವಿಸುತ್ತಿದೆ ಎಂದು ದೇವೇಗೌಡ ಗುಡುಗಿದ್ದಾರೆ.












Click it and Unblock the Notifications