ಬಿಜೆಪಿ ಪ್ರಹಸನಕ್ಕೆ ದೇವೇಗೌಡ ರಂಗಪ್ರವೇಶ

ಪಕ್ಷದ ಶಾಸಕರುಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದ ದೇವೇಗೌಡ, ಬಿಜೆಪಿಯನ್ನು ತೊಲಗಿಸಲು ಸಿಪಿಎಂ, ಸಿಪಿಐ ಮತ್ತು ರೈತಸಂಘಗಳು ಕೂಡ ಒಗ್ಗಟ್ಟಾಗ ಬೇಕು. ಸರಕಾರ ತೊಲಗಿದರೆ ಜನತೆಗೆ ಮುಕ್ತಿ ದೊರಕಿದಂತಾಗುತ್ತದೆ. ದೇವೇಗೌಡ ರಾಜ್ಯಕ್ಕೆ ಒಂದು ಶಾಪ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಾರೆ. ಆದರೆ ರಾಜ್ಯದ ಆರು ಕೋಟಿ ಜನತೆ ಎರಡು ವರ್ಷದಿಂದ ಅವರಿಗೆ ಶಾಪ ಹಾಕುತ್ತಿದ್ದಾರೆಂದು ಲೇವಡಿ ಮಾಡಿದರು.
ಸ್ಪೀಕರ್ ದಾರಿ ತಪ್ಪಿಸಿ ಬಿಜೆಪಿಯ 11 ಭಿನ್ನಮತೀಯ ಶಾಸಕರಿಗೆ ನೋಟಿಸ್ ಜಾರಿ ಮಾಡಿಸಿದ್ದಾರೆ. ಗೌರವಯುತವಾದ ಸ್ಪೀಕರ್ ಪೀಠದಿಂದ ಮುಖ್ಯಮಂತ್ರಿಗಳು ತಪ್ಪು ಮಾಡಿಸಲು ಹೊರಟಿರುವುದು ನೋವಿನ ವಿಷಯ. ಆಪರೇಷನ್ ಕಮಲದ ಮೂಲಕ ಶಾಸಕರ ಖರೀದಿ ಆರಂಭಿಸಿ ಅಶ್ಲೀಲ ರಾಜಕಾರಣ ನಡೆಸಿದ ಫಲ
ಈಗ ಬಿಜೆಪಿ ಅನುಭವಿಸುತ್ತಿದೆ ಎಂದು ದೇವೇಗೌಡ ಗುಡುಗಿದ್ದಾರೆ.












Click it and Unblock the Notifications