ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಣುಕಾ ವಿರುದ್ಧ ತಿರುಗಿನಿಂತ ಕಾರ್ಯಕರ್ತರು
ಯಡಿಯೂರಪ್ಪ ಸರಕಾರವನ್ನು ಪತನದ ಅಂಚಿಗೆ ತಂದಿಟ್ಟಿರುವ ರೇಣುಕಾಚಾರ್ಯ ಅವರ ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರು, ತಾಲೂಕ್ ಪಂಚಾಯತಿ ಅಧ್ಯಕ್ಷ, ಆರ್ಎಸ್ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಭಿನ್ನಮತದ ರಾಗವನ್ನು ಬದಲಿಸಿ ಇಕ್ಕಟ್ಟಿನಲ್ಲಿ ಸಿಲುಕಿರುವ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಹದಿನೆಂಟು ಶಾಸಕರನ್ನು ಚೆನ್ನೈನ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದ ರೇಣುಕಾಚಾರ್ಯ ಬಿಜೆಪಿ ಸರಕಾರಕ್ಕೆ ಬೆಂಬಲ ವಾಪಸ್ ಪಡೆದುದಾಗಿ ಹೇಳಿ ಫ್ಯಾಕ್ಸ್ ಕಳುಹಿಸಿದ್ದರು. ಅವರ ಮನವೊಲಿಸಲು ಜನಾರ್ದನ ರೆಡ್ಡಿ ಚೆನ್ನೈಗೆ ತೆರಳಿದ್ದರು. ಅವರಲ್ಲಿ ಕೆಲವರು ಹಿಂತಿರುಗಿ ಬಂದಿದ್ದಾರಾದರೂ ಸಂಧಾನ ವಿಫಲಗೊಂಡಿತ್ತು. ಭಿನ್ನರಾಗ ಹಾಡುತ್ತಿರುವವರನ್ನು ಸೆಳೆಯಲು ನಿರಂತರ ಪ್ರಯತ್ನ ನಡೆದೇಯಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡಕರಿ ಕೂಡ ಭಿನ್ನಮತೀಯ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ.
Comments
ರೇಣುಕಾಚಾರ್ಯ ಹೊನ್ನಾಳಿ ಭಿನ್ನಮತ ಬಿಜೆಪಿ ಯಡಿಯೂರಪ್ಪ ಮುಖ್ಯಮಂತ್ರಿ ಜನಾರ್ದನ ರೆಡ್ಡಿ ಚೆನ್ನೈ renukacharya honnali bjp dissidence yediyurappa chief minister janardhana reddy
Story first published: Thursday, October 7, 2010, 15:18 [IST]