ಮಿರ್ಜಿ ಎತ್ತಂಗಡಿ; ಗುಪ್ತಚರ ಐಜಿಪಿ ಹುದ್ದೆಗೆ ಹೊಸೂರ್

ಗುಲ್ಬರ್ಗ ಮರುಚುನಾವಣೆಯಲ್ಲಿ ಅಲ್ಲಿನ ನಾಡಿಮಿಡಿತ ಅರಿಯಲು ವಿಫಲಾರಾಗಿದ್ದೇ ಮಿರ್ಜಿ ಅವರಿಗೆ ಮುಳುವಾಗಿದೆ. ಅವರಿಗೆ ಈಗ ರೈಲ್ವೆ ಎಡಿಜಿಪಿ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ. ಅಲ್ಲಿದ್ದ ಕೆ ಎಸ್ ಎನ್ ಚಿಕ್ಕೆರೂರ್ ಅವರನ್ನು ಸಿಐಡಿ ಅರಣ್ಯ ಘಟಕಕ್ಕೆ ವರ್ಗಾಯಿಸಲಾಗಿದೆ.
ಸುಮಾರು ಒಂದು ತಿಂಗಳ ಹಿಂದಷ್ಟೇ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ಹೊಸೂರ್ ಅಧಿಕಾರ ವಹಿಸಿಕೊಂಡಿದ್ದರು. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ತೀರ್ಪು ಹೊರಬೀಳುವ ಸಂದರ್ಭದಲ್ಲಿ ಹೊಸೂರ್ ಅವರನ್ನು ಆಯ್ಕೆ ಮಾಡಿರುವುದು ಗಮನಾರ್ಹ.












Click it and Unblock the Notifications