ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಸಿಟಿಯಲ್ಲಿ ವರದಕ್ಷಿಣೆ ಭೂತಕ್ಕೆ ಗೃಹಿಣಿ ಬಲಿ

By Mahesh
|
Google Oneindia Kannada News

Dowry harassment woman commits suicide
ಬೆಂಗಳೂರು, ಸೆ.21: ಹೈಟೆಕ್ ಸಿಟಿ ಬೆಂಗಳೂರಿನಲ್ಲಿ ಇನ್ನೂ ವರದಕ್ಷಿಣೆ ಪಿಡುಗು ಕಮ್ಮಿಯಾಗಿಲ್ಲ. ಪ್ರೀತಿಸಿ ಮದುವೆಯಾದರೂ ಗಂಡನ ಕಿರುಕುಳ ತಾಳಲಾರದೆ ಗೃಹಿಣಿ ಪ್ರಾಣ ಕಳೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಮಾಗಡಿ ರಸ್ತೆಯ ಚೋಳೂರು ಪಾಳ್ಯದ ನಿವಾಸಿ ವಾಣಿ (25)ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿರುವ ನರಸಿಂಹಮೂರ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಳು.

ಇವರಿಗೆ ಚೈತನ್ಯ ಎಂಬ ಒಂದು ವರ್ಷದ ಹೆಣ್ಣು ಮಗುವಿದೆ. ಪತಿ ನರಸಿಂಹಮೂರ್ತಿ ಪತ್ನಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನು. ಎರಡು ಬಾರಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ತವರು ಮನೆಗೆ ಕಳುಹಿಸಿದ್ದನು. ಪ್ರತಿ ಬಾರಿ ಹಣ ಇಲ್ಲದಿದ್ದಾಗ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನು. ಇದರಿಂದ ಬೇಸತ್ತ ವೀಣಾ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆದರೆ ತನ್ನ ಮಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಅಲ್ಲ ಎಂದು ವೀಣಾ ತಾಯಿ ಮಂಗಳ ಮಾಗಡಿ ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪತಿಯೇ ಪತ್ನಿಗೆ ವಿಷ ನೀಡಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X