ಮತ್ತೊಂದು ಹಗರಣದಲ್ಲಿ ಪಾಕಿ ಕ್ರಿಕೆಟರ್ಸ್

ಈ ಆಘಾತಕಾರಿ ವಿಷಯ ಕೇಳಿ ಬರುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ವ್ಯಾಪಕ ತನಿಖೆಯನ್ನೂ ಆರಂಭಿಸಿದೆ. ಪಾಕಿಸ್ತಾನ ತಂಡದಲ್ಲಿನ ಆಟಗಾರನೊಬ್ಬ ಇದರ ಕೇಂದ್ರಬಿಂದುವಾಗಿದ್ದಾನೆ. ಭಾರತ ಮತ್ತು ದುಬೈಗಳಲ್ಲಿನ ಬುಕ್ಕಿಗಳಿಂದ ಹಣ ಪಡೆದಿರುವ ಈ ಆಟಗಾರ, ತಂಡ ಹೇಗೆ ರನ್ ಗಳಿಸಬೇಕು ಎಂಬುದರ ಉಸ್ತುವಾರಿ ವಹಿಸಿರುವಾತ. ಬುಕ್ಕಿಗಳ ಅಣತಿಯಂತೆ ಆಟ ನಡೆಸುವ ಸೂತ್ರಧಾರ. 'ದಿ ಸನ್" ಪತ್ರಿಕೆ ಈ ವಿವರಗಳನ್ನು ಬಯಲಾಗಿಸಿದೆ.
ತನಿಖೆ ಆರಂಭಗೊಂಡಿರುವ ಕಾರಣ 'ದಿ ಸನ್" ಈ ಕಳ್ಳಾಟಕ್ಕೆ ಸಂಬಂಧಿಸಿದ ವಿವರಗಳನ್ನು ಸದ್ಯಕ್ಕೆ ತಡೆ ಹಿಡಿದಿದೆ. ಆದರೆ ಐಸಿಸಿ ಈ ವಿಷಯದ ಬಗ್ಗೆ ಎಷ್ಟು ವೇಗವಾಗಿ ಸ್ಪಂದಿಸಿತು ಎಂದರೆ ಈ ಪಂದ್ಯದಲ್ಲಿ ಪಾಕಿಸ್ತಾನದ ಇನಿಂಗ್ಸ್ ಕೊನೆಗೊಳ್ಳುವ ಮುಂಚೆಯೇ ತನಿಖೆ ಆರಂಭಿಸಿಬಿಟ್ಟಿದೆ. ಸನ್ ಪತ್ರಿಕೆ ಪಂದ್ಯದ ಆರಂಭಕ್ಕೆ ಮುನ್ನವೇ '?ಫಿಕ್ಸಿಂಗ್' ವಿವರಗಳನ್ನು ಐಸಿಸಿಗೆ ರವಾನಿಸಿತ್ತು.
ಪಾಕ್ ತಂಡದಲ್ಲಿನ ವ್ಯಕ್ತಿ (ಆಟಗಾರ) ಯೊಬ್ಬನೇ ಇದೆಲ್ಲದರ ಉಸ್ತುವಾರಿ ವಹಿಸಿದ್ದಾನೆ. ಪಾಕ್ ತಂಡದ ಇನಿಂಗ್ಸ್ ಆರಂಭ ಗೊಳ್ಳುವ ಮುಂಚೆಯೇ ಅದು ರನ್ ಗಳಿಸುವ ವಿಧಾನದ ಬಗ್ಗೆ ಬುಕ್ಕಿಗೆ ತಿಳಿದಿರುತ್ತದೆ. ಲಂಡನ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯ ಸಂಪೂರ್ಣವಾಗೇನೂ (ಫಲಿತಾಂಶ ಇತ್ಯಾದಿ) ಫಿಕ್ಸ್ ಆಗಿರಲಿಲ್ಲ.
ಬದಲಾಗಿ ಪಾಕಿಸ್ತಾನ ಗಳಿಸುವ ರನ್ ವಿಧಾನವಷ್ಟೇ ಫಿಕ್ಸ್ ಆಗಿತ್ತು. ಈ ಬಗ್ಗೆ ಬ್ರಿಟಿಷ್ ಮಾಧ್ಯಮದಿಂದ ಪಡೆದಿರುವ ದಾಖಲೆಗಳ ಆಧಾರದ ಮೇಲೆ ಐಸಿಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಪಾಕ್ ತಂಡದ ಪ್ರತಿಯೊಬ್ಬ ಸದಸ್ಯನ ಮೇಲೂ ಹದ್ದಿನ ಕಣ್ಣು ಇಟ್ಟಿದೆ. ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೂನ್ ಲಾರ್ಗತ್, ಬ್ರಿಟಿಷ್ ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications