Get Updates
Get notified of breaking news, exclusive insights, and must-see stories!

ಬಸವನಗುಡಿಯಲ್ಲಿ ವಿದ್ಯಾರ್ಥಿಯ ಕಗ್ಗೊಲೆ

Studnet beaten to death at KG Nagar
ಬೆಂಗಳೂರು, ಸೆ.16: ವಿನಾಕಾರಣ ಯುವ ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಘಟನೆ ಬುಧವಾರ ಸಂಜೆ ಬಸವನಗುಡಿ ಸಮೀಪದಲ್ಲಿ ಜರುಗಿದೆ.

ಕೆಂಪೇಗೌಡ ನಗರದ 6ನೇ ಕ್ರಾಸ್ ಆರ್.ಕೆ.ಲೇಔಟ್ ನಿವಾಸಿ ಮನೋಜ್ ದತ್(15) ಕೊಲೆಗೀಡಾದ ಶಾಲಾ ಬಾಲಕ.ಬುಲ್‌ಟೆಂಪಲ್ ರಸ್ತೆಯ ಉದಯಭಾನು ಆಟದ ಮೈದಾನದ ಮೂಲಕ ಮನೋಜ್ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಶಂಕರಮಠದ ವುಮೆನ್ಸ್ ಪೀಸ್ ಲೀಗ್ ಶಾಲೆಯ ಎಸ್ಸೆಸೆಲ್ಸಿ ವಿದ್ಯಾರ್ಥಿಮನೋಜ್ ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗಿದ್ದಾನೆ. ಸಂಜೆ 5ಗಂಟೆಗೆ ಶಾಲೆ ಮುಗಿಸಿಕೊಂಡು ಬುಲ್‌ಟೆಂಪಲ್ ರಸ್ತೆಯ ಕಡೆಯಿಂದ ಉದಯಭಾನು ಮೈದಾನದ ಬಳಿ ಹೋಗುತ್ತಿದ್ದಾಗ,ಕನ್ನಡ ನಂಬರ್ ಪ್ಲೇಟ್ ಇದ್ದ ಸುಜುಕಿ ಸಮುರಾಯ್ ಬೈಕ್ ಗಳಲ್ಲಿ ಬಂದ ಕೆಲ ದುರ್ಷ್ಕಮಿಗಳು ಮನೋಜ್ ಅನ್ನು ಅಡ್ಡಗಟ್ಟಿದ ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ.

ಈ ಘಟನೆಯನ್ನು ನೋಡಿದ ಸಾರ್ವಜನಿಕರು ತೀವ್ರವಾಗಿ ಗಾಯಗೊಂಡಿದ್ದಬಾಲಕನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ರಸ್ತೆ ಮಧ್ಯೆ ಮನೋಜ್ ಮೃತಪಟ್ಟಿದ್ದಾನೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಮೃತನ ತಂದೆ ಚನ್ನೇಶ ಮೂಲತ ಮಂಡ್ಯ ಜಿಲ್ಲೆಯವರು,ಕೆಲ ವರ್ಷಗಳಿಂದ ಬೆಂಗಳೂರಿನ ಕೆಂಪೇಗೌಡಬಡಾವಣೆಯಲ್ಲಿ ವಾಸಿಸುತ್ತಿದ್ದಾರೆ.ಜೀವನೋಪಯಕ್ಕಾಗಿ ಅಟೋ ರಿಕ್ಷಾ ಓಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೌಟುಂಬಿಕ ಕಲಹ ಅಥವಾ ಶಾಲೆಯಲ್ಲಿ ಲವ್ ಅಫೇರ್ ಕಾರಣವಿರಬಹುದು ಅಥವಾ ಶ್ರೀರಂಗ ಮೈದಾನ, ಉದಯಭಾನು ಕಲಾಸಂಘದ ಮೈದಾನದಲ್ಲಿನ ಕ್ರಿಕೆಟ್ ವ್ಯಾಜ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಕೆಂಪೇಗೌಡ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+