ಕೇಂದ್ರೀಯ ನೌಕರರಿಗೆ ಗಣೇಶನಿಂದ ಬಂಪರ್ ಗಿಫ್ಟ್
ನವದೆಹಲಿ,
ಸೆ. 16 : ಕೇಂದ್ರ ಸರಕಾರಿ ನೌಕರರಿಗೆ ವಿಘ್ನ ನಿವಾರಕ ವಿನಾಯಕ ಬಂಪರ್ ಕೊಡುಗೆ ನೀಡಿ ಟಾಟಾ ಹೇಳಿದ್ದಾನೆ. ಕೇಂದ್ರ ಸರಕಾರಿ ಉದ್ಯೋಗಿಗಳು ಜುಲೈ 1 ರಿಂದ ಮೂಲ ವೇತನಕ್ಕೆ ಅನ್ವಯವಾಗುವಂತೆ ಶೇ. 10ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡುವ ತೀರ್ಮಾನವನ್ನು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿದೆ. id="toptextpromo">ಶೇ10ರಷ್ಟು
ತುಟ್ಟಿ ಭತ್ಯೆ ಜುಲೈ 1 ರಿಂದಲೇ ಜಾರಿಗೆ ಬರಲಿದ್ದು, ಕೇಂದ್ರ ಸರಕಾರದ ಸುಮಾರು 50 ಲಕ್ಷ ಉದ್ಯೋಗಿಗಳು ಮತ್ತು 38 ಲಕ್ಷ ಪಿಂಚಣಿದಾರರು ತುಟ್ಟಿ ಭತ್ಯೆ ಏರಿಕೆಯ ಸದುಪಯೋಗವನ್ನು ಪಡೆದುಕೊಳ್ಳಲಿದ್ದಾರೆ. ಇತ್ತೀಚೆಗೆ ಆಹಾರ ವಸ್ತುಗಳು ಬೆಲೆಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಡಿಎ ಏರಿಕೆಗೆ ಕೇಂದ್ರ ಸರಕಾರಿ ಉದ್ಯೋಗಿಗಳು ಒತ್ತಾಯಿಸಿದ್ದರು. id='are-slot-1' class='oiad oi-axt oiadv'> id='top-searched-articles'>6ನೇ
ಹಣಕಾಸು ಆಯೋಗದ ಮೂಲಕ ಕೇಂದ್ರ ಸರಕಾರಿ ಉದ್ಯೋಗಿಗಳ ಡಿಎ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಹೇಳಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದ ಕೇಂದ್ರ ಸರಕಾರ ಹಣಕಾಸು ಇಲಾಖೆ 2010-11ರ ಸಾಲಿನಲ್ಲಿ ಒಟ್ಟು 64 ಸಾವಿರ ಕೋಟಿ ರುಪಾಯಿಗಳನ್ನು ಉದ್ಯೋಗಿಗಳ ಸಂಬಳವಾಗಿ ನೀಡಲಿದೆ.











Click it and Unblock the Notifications