ಸಿದ್ದು ಪಕ್ಕಾ ಅವಕಾಶವಾದಿ : ವರ್ತೂರ್ ಪ್ರಕಾಶ್

ನನ್ನ ಹಿಂದಿನ ಹೇಳಿಕೆಯನ್ನು ಚಿಲ್ಲರೆ ಹೇಳಿಕೆ ಎಂದಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಬಂದ ಮೇಲೆ ಯಾರು ಚಿಲ್ಲರೆಯೆಂದು ಗೊತ್ತಾಗಲಿದೆ. ಕುರುಬ ಸಮುದಾಯದ ಮತ್ತೊಬ್ಬ ಮುಖಂಡರು ರಾಜಕೀಯವಾಗಿ ಮೇಲೆ ಬರುವುದು ಸಿದ್ದರಾಮಯ್ಯವರಿಗೆ ಬೇಕಾಗಿಲ್ಲ. ಕುರುಬ ಸಮಾಜದಿಂದ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸದಂತೆ ಎಲ್ಲಾ ಮುಖಂಡರಿಗೆ ಸಿದ್ದು ಸಲಹೆ ನೀಡಿದ್ದಾರೆ. ಆದರೆ ಈ ಪ್ರಕಾಶ್ ಅದಕ್ಕೆ ತಲೆಕೆಡಿಸಿ ಕೊಳ್ಳುವವನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಸ್ವಸಾಮರ್ಥ್ಯದಿಂದ ಮೇಲೆ ಬಂದವನು. ನಾನು ಕಡೂರಿನ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರನ್ನು ಭೇಟಿಯಾಗಿದ್ದೆ. ನನ್ನ ಆರೋಪದ ಹಿಂದೆ ಗೌಡರ ಅಣತಿಯೇನೂ ಇಲ್ಲ. ಸಿದ್ದು ಅವರ ಕುರುಬ ವಿರೋಧಿ ನೀತಿಯಿಂದ ಬೇಸತ್ತು ಈ ಹೇಳಿಕೆ ನೀಡುತ್ತಿದ್ದೇನೆ, ಕುರುಬ ಸಮದಾಯದಲ್ಲಿ ಬಹಳಷ್ಟು ಜನ ಸಿದ್ದು ಅವರ ವಿರುದ್ಧವಿದ್ದಾರೆ ಎನ್ನುವುದು ಅವರಿಗೆ ತಿಳಿದಿರಲಿ ಎಂದು ವರ್ತೂರು ಪ್ರಕಾಶ್ ಸಿದ್ದು ಅವರ ಮೇಲೆ ಹರಿಹಾಯ್ದಿದಿದ್ದಾರೆ.












Click it and Unblock the Notifications