ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ಆಭರಣಗಳಿಗೆ ವಿಮೆ ರಕ್ಷೆ

By Mahesh
|
Google Oneindia Kannada News

TTD Balaji's Jewels to get insurance
ತಿರುಮಲ, ಸೆ.4: ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ತಿರುಪತಿಯ ಶ್ರೀ ವೆಂಕಟೇಶ್ವರನ ದೇವಸ್ಥಾನವು ಶೀಘ್ರವೇ 52,000 ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ವಿಮಾ ರಕ್ಷಣೆಯನ್ನು ಹೊಂದಲಿದೆ.

ತಿರುಪತಿ ತಿಮ್ಮಪ್ಪನ ಬಳಿಯಿರುವ 52,000ಕೋ.ರೂ. ಮೌಲ್ಯದ ಚಿನ್ನಾಭರಣಗಳಿಗಾಗಿ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನಿರ್ಧರಿಸಿದೆ . ಪ್ರತಿದಿನ ಏನಿಲ್ಲವೆಂದರೂ 70,000 ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಿದ್ದು, ಪ್ರತಿ ತಿಂಗಳೂ ಸುಮಾರು ಎರಡು ಮಿಲಿಯ ಡಾಲರ್ ಕಾಣಿಕೆ
ಸಂಗ್ರಹವಾಗುತ್ತದೆ.

ಅಲ್ಲದೆ, ದರ್ಶನ ಟಿಕೆಟ್‌ಗಳು ಮತ್ತು ಪ್ರಸಾದದ ಮಾರಾಟ, ಹರಾಜುಗಳಂತಹ ಇತರ ಮೂಲಗಳಿಂದಲೂ ದೇವಸ್ಥಾನಕ್ಕೆ ಭರಪೂರ ಆದಾಯ ಹರಿದು ಬರುತ್ತಿದೆ. ದೇವಸ್ಥಾನದಲ್ಲಿ 20 ಟನ್‌ಗಳಷ್ಟು ಚಿನ್ನ ಮತ್ತು ವಜ್ರಾಭರಣಗಳಿವೆ ಎನ್ನಲಾಗಿದ್ದು, ಕೆಲವು 12 ನೇ ಶತಮಾನದಷ್ಟು ಹಳೆಯದಾಗಿವೆ.

ಕಳೆದ ವರ್ಷ ಕರ್ನಾಟಕದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಶ್ರೀ ದೇವರಿಗೆ 42 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟವನ್ನು ಅರ್ಪಿಸಿದ್ದರು. ಆದರೂ, ತಿರುಪತಿ ಬಾಲಾಜಿಯ ಸಂಪತ್ತಿಗೆ ವಿಮೆ ಮಾಡಿಸುವುದು ಪ್ರಯಾಸದ ಕಾರ್ಯವಾಗಲಿದೆ. ಇದರಲ್ಲಿ ಅಡಗಿರುವ ಅಪಾಯ ಮತ್ತು ಆಭರಣಗಳ ಪ್ರಾಚೀನ ಲಕ್ಷಣಗಳನ್ನು ಪರಿಗಣಿಸಿದರೆ ಪ್ರೀಮಿಯಂ ಹಣ ಸಾಕಷ್ಟು ದೊಡ್ಡ ಮೊತ್ತವಾಗಬಹುದು ಎಂದು ವೃತ್ತಪತ್ರಿಕೆಯೊಂದು ವರದಿ ಮಾಡಿದೆ.

ಟ್ರಸ್ಟ್‌ನ ನಿರ್ಧಾರವು ಕಾರ್ಯಗತಗೊಂಡರೆ ತಿರುಪತಿ ತಿಮ್ಮಪ್ಪನ ವಿಮಾಪಾಲಿಸಿ 26 ಬಿಲಿಯನ್ ಡಾಲರ್‌ಗಳ ವಿಮೆಯನ್ನು ಹೊಂದಿರುವ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ (ಒಎನ್‌ಜಿಸಿ)ವನ್ನು ಹಿಂದಿಕ್ಕಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X