ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗ್ಳೂರಿಂದ ಮಡಿಕೇರಿಗೆ ಮದನಿ ಎತ್ತಂಗಡಿ
ಮಡಿಕೇರಿ ಮತ್ತು ಎರ್ನಾಕುಲಂ ನಲ್ಲಿ ಬಾಡಿಗೆ ಮನೆಗಳನ್ನು ಹಿಡಿದು ಸರಣಿ ಸ್ಫೋಟಕ್ಕೆ ಪಿತೂರಿ ಮಾಡುವ ಸಭೆಗಳನ್ನು ಮದನಿ ತನ್ನ ಸಹಚರರೊಂದಿಗೆ ನಡೆಸಿದ್ದ ಎಂದು ವಿಚಾರಣೆ ಸಮಯದಲ್ಲಿ ಗೊತ್ತಾಗಿರುವುದರಿಂದ ಅವನನ್ನು ಮಡಿಕೇರಿಗೆ ಕರೆದೊಯ್ಯಲಾಗುತ್ತಿದೆ ಎಂದು ಡಿಎನ್ ಎ ಪತ್ರಿಕೆ ವರದಿ ಮಾಡಿದೆ.
ಪ್ರಕರಣದ ಇನ್ನಿಬ್ಬರು ಪ್ರಮುಖ ಆರೋಪಿಗಳಾಗಿರುವ ಟಿ ನಸೀರ್ ಮತ್ತು ಅಬ್ದುಲ್ ರಹೀಂ ಮಡಿಕೇರಿ ಪಿತೂರಿ ಸಭೆಯಲ್ಲಿ ಮದನಿ ಜತೆಗೆ ಇದ್ದರು ಎಂದು ಗೊತ್ತಾಗಿದೆ.
ಆರೋಪಿ ನಸೀರ್ ನನ್ನು ಬೆಂಗಳೂರು ಸ್ಫೋಟಕ್ಕೆ ಮುಂಚೆ ಮತ್ತು ಸ್ಫೋಟದ ನಂತರ ಮದನಿ ಸಂಪರ್ಕಿಸಿದ್ದ ಎನ್ನುವುದಕ್ಕೆ ಪೊಲೀಸರಿಗೆ ಸುಳಿವು ನೀಡುವ ದಾಖಲೆಗಳು ಸಿಕ್ಕಿವೆ. ಇದೇ ವೇಳೆ, ಮದನಿಯನ್ನು ಬೆಂಗಳೂರಿನ ಒಂದು ನಿಗೂಢ ಸ್ಥಳದಲ್ಲಿ ಇಡಲಾಗಿದ್ದು ವಿಚಾರಣೆ ಸುಸೂತ್ರವಾಗಿ ಸಾಗುತ್ತಿದೆ ಎಂದು ಪೊಲೀಸರೇ ಹೇಳಿದ್ದಾರೆ. ಮದನಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ ಹಾಗೂ ರಮ್ ಜಾನ್ ಉಪವಾಸ ವ್ರತ ಮಾಡುವುದಕ್ಕೆ ಆತನಿಗೆ ಅವಕಾಶ ನೀಡಲಾಗಿದೆ ಎಂದು ಈ ಮೂಲಗಳು ತಿಳಿಸಿವೆ.
Comments
ಅಬ್ದುಲ್ ನಾಸಿರ್ ಮದನಿ ಬೆಂಗಳೂರು ಸ್ಫೋಟ ಮಡಿಕೇರಿ ಕರ್ನಾಟಕ ಪೊಲೀಸ್ ಕ್ರೈಂ bengaluru serial blast madikeri crime beat
Story first published: Friday, August 20, 2010, 15:31 [IST]