ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪನ್ಯಾಸಕಿ ರೂಂನಲ್ಲಿ ವಿದ್ಯಾರ್ಥಿ ನಿಗೂಢ ಸಾವು

By Rajendra
|
Google Oneindia Kannada News

Student commits suicide in lecturer’s house
ಬೆಂಗಳೂರು,ಆ .17: ಆತ್ಮಹತ್ಯೆ, ಕೊಲೆ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿದ್ದು, ಉಪನ್ಯಾಸಕಿಯ ಕೊಠಡಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದು ಪ್ರಕರಣ ನಿಗೂಢವಾಗಿದೆ. ಆರ್ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಮ್ಯಾನೇಜಮೆಂಟ್ ನ ಏಳನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಜೆಮ್ ಶೆಡ್ ಪುರ ಮೂಲದ ಆದಿತ್ಯ ಪ್ರಸಾದ್ (23) ಮೃತಪಟ್ಟ ವಿದ್ಯಾರ್ಥಿ.

ರಾಜರಾಜೇಶ್ವರಿ ನಗರದ ಬಿಇಎಂಎಲ್ ಬಡಾವಣೆಯಲ್ಲಿ ವಾಸವಿರುವ ಅದೇ ಕಾಲೇಜಿನ ಉಪನ್ಯಾಸಕಿ ಮತ್ತು ಅವಿವಾಹಿತೆ ಪದ್ಮಶ್ರೀ ಎಂಬುವರ ಕೊಠಡಿಯಲ್ಲಿ ಆದಿತ್ಯಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈ ಘಟನೆ ನಡೆದ ಸಂದರ್ಭದಲ್ಲಿ ಪದ್ಮಶ್ರೀ ರೂಂನಲ್ಲಿರಲಿಲ್ಲ.

ಪದ್ಮಶ್ರೀ ರೂಂಗೆ ಆಗಾಗ ಬರುತ್ತಿದ್ದ ಆದಿತ್ಯ ಶನಿವಾರದಂದು (ಆ.14) ಕೂಡ ರೂಮಿಗೆ ಬಂದಿದ್ದ. ಅಲ್ಲಿ ಪದ್ಮಶ್ರೀ ಇಲ್ಲದಿರುವುದನ್ನು ಕಂಡು ರೂಮಿಗೆ ಬರುವಂತೆ ನಿರಂತರವಾಗಿ ಮೊಬೈಲ್ ಗೆ ಕರೆ ಮಾಡಿ ಬರುವಂತೆ ತಿಳಿಸಿದ್ದ. ಇದರಿಂದ ಗಾಬರಿಗೊಂಡ ಪದ್ಮಶ್ರೀ ಮೈಸೂರು ರಸ್ತೆಯಲ್ಲಿ ಮಾರ್ಗಮಧ್ಯೆ ರೂಮಿಗೆ ಹಿಂದಿರುಗಿ ಬಂದಾಗ ಆದಿತ್ಯ ನೇಣಿಗೆ ಶರಣಾಗಿದ್ದ.

ಆದಿತ್ಯಪ್ರಸಾದ್ ಆತ್ಮಹತ್ಯೆಗೆ ಉಪನ್ಯಾಸಕಿ ಪದ್ಮಶ್ರೀ ಮೇಲೆ ಆತ ಹೊಂದಿದ್ದ ಪ್ರೇಮಪ್ರಕರಣ ಮುಖ್ಯ ಕಾರಣವೆನ್ನಲಾಗಿದೆ. ಗುಲ್ಬರ್ಗ ಮೂಲದ ಪದ್ಮಶ್ರೀ ಮತ್ತು ಆದಿತ್ಯ ಇಬ್ಬರಲ್ಲೂ ಸ್ನೇಹವಾಗಿ ಸಲುಗೆ ಇತ್ತು.ಹೀಗಾಗಿ ಪದ್ಮಶ್ರೀ ರೂಮಿಗೆ ಆದಿತ್ಯ ಆಗಾಗ ಬಂದು ಹೋಗುತ್ತಿದ್ದ. ಆದಿತ್ಯನ ಸಾವು ಹಲವು ಸಂಶಯಗಳಿಗೆ ಕಾರಣವಾಗಿರುವ ಹಿನ್ನಲೆಯಲ್ಲಿ ಪೊಲೀಸರು ಪದ್ಮಶ್ರೀ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X