ಇಂದು ನಾಗರ ಪಂಚಮಿ; ಬನ್ನಿ ನಾಗಪ್ಪನನ್ನು ಉಳಿಸೋಣ

ಈ ಬಾರಿ ನಾಗರ ಪಂಚಮಿ ಶನಿವಾರ ಬಂದಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ವಿಶೇಷವಾಗಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಲ್ಲಿ ಹಬ್ಬದ ವಾತಾವರಣ. ಹಬ್ಬ ಆಚರಿಸುವುದರಿಂದ ನಾಗದೋಷ ನಿವಾರಣೆಯಾಗುತ್ತದೆ, ಕಷ್ಟಗಳು ಪರಿಹಾರವಾಗುತ್ತದೆ ಎಂಬುದು ನಂಬಿಕೆ.
ಬೆಳಗ್ಗೆ ಬೇಗನೆ ಎದ್ದು ಮಂಗಳ ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ಉಟ್ಟು ನಾಗಪ್ಪನಿಗೆ ಹಾಲೆರುವ ದೃಶ್ಯ ಇಂದು ನಗರದದೆಲ್ಲೆಡೆ ಕಂಡುಬಂದಿತು. ಅಣ್ಣ ತಮ್ಮಂದಿರ ಒಳಿತಿಗಾಗಿ ಅಕ್ಕತಂಗಿಯರು ನಾಗದೇವರನ್ನು ಪೂಜಿಸುವುದೇ ಈ ಹಬ್ಬದ ವಿಶೇಷ. ನಾಗರ ಕಟ್ಟೆಗೆ ಹಾಲು, ಮೊಸರು, ತುಪ್ಪ, ಜೇನಿನಿಂದ ಅಭಿಷೇಕವನ್ನು ಮಾಡಲಾಗುತ್ತದೆ. ಹುತ್ತಕ್ಕೆ ಹಾಲನ್ನು ಎರೆದು ಭಯ, ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತದೆ.
ಎಳ್ಳು, ಅಕ್ಕಿ ಮತ್ತು ಬೆಲ್ಲ ಮಿಶ್ರಿತ ಪ್ರಸಾದವನ್ನು ಹಂಚುವ ದೃಶ್ಯಗಳು ಕಂಡುಬಂದವು. ಹೀಗೆ ಮಾಡುವುದರಿಂದ ಸೋದರರ ಆಯುಸ್ಸು ವೃದ್ಧಿಸುತ್ತದೆ ಎಂಬುದು ನಂಬಿಕೆ. ಕೆಂಪು ನೀರಿನಲ್ಲಿ ಸೋದರರಿಗೆ ಆರತಿ ತೆಗೆದು ದೃಷ್ಟಿ ತೆಗೆದು ಅರಿಶಿಣದಾರದಲ್ಲಿ ಹೂವನ್ನು ಸೋದರರ ಕೈಗೆ ಕಟ್ಟಿ ಅಕ್ಕತಂಗಿಯರು ಸಂಭ್ರಮಿಸುತ್ತಿದ್ದರು.
ಬನ್ನಿ ನಾಗಪ್ಪನನ್ನು ರಕ್ಷಿಸೋಣ
ಹಲವಾರು ಜಾತಿಯ ಸರ್ಪಗಳು ಇಂದು ಅವಸಾನದ ಅಂಚಿನಲ್ಲಿವೆ. ಜೀವ ಸರಪಳಿಯಲ್ಲಿ ಸರ್ಪಗಳ ಪಾತ್ರ ಅನನ್ಯ.ಒಂದೆಡೆ ಹಾವುಗಳನ್ನು ಪೂಜಿಸುತ್ತಿದ್ದರೆ ಮತ್ತೊಂದೆಡೆ ಅಮಾನವೀಯವಾಗಿ ಸಾಯಿಸಲಾಗುತ್ತಿದೆ. ಹಾವಾಡಿಗರ ಕೈಗೆ ಸಿಕ್ಕ ಎಷ್ಟೋ ಹಾವುಗಳು ನೋವು ಅನುಭವಿಸುತ್ತಿವೆ. ಈ ನಾಗಪಂಚಮಿಯಂದು ಹಾವುಗಳನ್ನು ರಕ್ಷಿಸುವ ಪಣ ತೊಡೋಣ.
ಮನೆ ಅಥವಾ ಸುತ್ತಮುತ್ತ ಹಾವು ಕಂಡ ತಕ್ಷಣ ಗಾಬರಿ, ಭಯ ಬೀಳಬೇಡಿ. ಎಲ್ಲ ಹಾವುಗಳೂ ವಿಷಪೂರಿತವಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ. ರೈತನ ಮತ್ತೊಬ್ಬ ಮಿತ್ರ ಈ ಹಾವುಗಳು. ಅವುಗಳನ್ನು ಕೊಲ್ಲದೆ ಹಾವು ಹಿಡಿಯುವರ ಸಹಾಯದಿಂದ ಅದನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications