ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಮಿ ಸ್ವಾಮಿ ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ
ಸ್ವಾಮಿ ನಿತ್ಯಾನಂದ ಕುರಿತ ಈ ಪುಸ್ತಕ ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಿತ್ತು. ಪುಸ್ತಕದಲ್ಲಿ ಛಾಯಾಚಿತ್ರಗಳೊಂದಿಗೆ ಸ್ವಾಮಿ ನಿತ್ಯಾನಂದ ರಾಸಲೀಲೆ ಸೇರಿದಂತೆ ಹಲವಾರು ಲೇಖನಗಳಿವೆ. ಈ ಸಂಬಂಧ ಸ್ವಾಮಿ ನಿತ್ಯಾನಂದ ಭಕ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪುಸ್ತಕದಲ್ಲಿ ಸ್ವಾಮಿ ನಿತ್ಯಾನಂದ ಬಗ್ಗೆ ಅವಹೇಳನಕಾರಿ ಲೇಖನಗಳಿವೆ. ಸ್ವಾಮಿಗಳ ಬಗ್ಗೆ ಹಾಗೆ ಬರೆದಿದ್ದು ನಮಗೆ ನೋವು ತಂದಿದೆ. ಪುಸ್ತಕ ಮಾರಾಟವನ್ನು ಕೂಡಲೆ ನಿಲ್ಲಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ಮುಖ್ಯನ್ಯಾಯಮೂರ್ತಿ ಹುನಗುಂದ ಅವರು 'ಕಾಮಿ ಸ್ವಾಮಿ' ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ ನೀಡಿದ್ದಾರೆ.
Comments
ಸ್ವಾಮಿ ನಿತ್ಯಾನಂದ ರಾಮನಗರ ತಡೆಯಾಜ್ಞೆ ರಾಸಲೀಲೆ ಬಿಡದಿ ಧ್ಯಾನಪೀಠ swami nithyananda ramanagara bidadi stay order
Story first published: Thursday, August 12, 2010, 9:49 [IST]