ಬಿಹೆಚ್ ಇಎಲ್ ಗೆ ಪ್ರತಿಸ್ಪರ್ಧಿಯಾದ ಎಲ್ ಅಂಡ್ ಟಿ

ಈ ವರೆಗೆ ದೇಶದಲ್ಲಿ ಈ ಭಾರೀ ವಿದ್ಯುತ್ ಉಪಕರಣಗಳನ್ನು ಸರ್ಕಾರೀ ಸ್ವಾಮ್ಯದ ಬಿಹೆಚ್ಇಎಲ್ ಮಾತ್ರ ತಯಾರಿಸುತ್ತಿದ್ದು, ಇದೀಗ ಈ ರಂಗ ಪ್ರವೇಶಿಸಿರುವ ಎರಡನೇ ಕಂಪೆನಿ ಎಲ್ ಅಂಡ್ ಟಿ ಆಗಿದ್ದು ಸರ್ಕಾರಿ ಕಂಪೆನಿಗೆ ಪೈಪೋಟಿ ನೀಡಲಿದೆ.
ಕಂಪೆನಿ ಈಗಾಗಲೇ 6500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಉಪಕರಣಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆದಿದೆ. ಎಲ್ ಅಂಡ್ ಟಿ ತನ್ನ ಮೊದಲ ಟರ್ಬೈನನ್ನು ಆಂಧ್ರಪ್ರದೇಶ ಪವರ್ ಜನರೇಷನ್ ಕಾರ್ಪೊರೇಷನ್ ಗೆ ಸರಬರಾಜು ಮಾಡಲಿದೆ.
ಕಾರ್ಪೊರೇಷನ್ ಕೃಷ್ಣಪಟ್ಣಂ ಯೋಜನೆಯನ್ನು ಮುಂದಿನ ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಲಿದ್ದು ಇದಕ್ಕೆ ಕಂಪೆನಿ ತಲಾ 800 ಮೆಗಾ ವ್ಯಾಟ್ ಗಳ ಎರಡು ಉಪಕರಣಗಳನ್ನು ಪೂರೈಸಲಿದೆ ಎಂದು ಎಲ್ ಅಂಡ್ ಟಿ ಪವರ್ ನ ವ್ಯವಸ್ಥಾಪಕ ನಿರ್ದೇಶಕ ರವಿ ಉಪ್ಪಳ್ ತಿಳಿಸಿದರು.
ಮೊದಲ ಟರ್ಬೈನ್ ಸರಬರಾಜು ಮಾಡಿದ 3-4 ತಿಂಗಳ ನಂತರ ಇತರ ಗುತ್ತಿಗೆಗಳನ್ನು ಪೂರೈಸಲಾಗುವುದು ಎಂದು ಅವರು ಹೇಳಿದರು.
ಆಂಧ್ರಪ್ರದೇಶದ ಗುತ್ತಿಗೆ ಮೌಲ್ಯ 1557 ಕೋಟಿ ರುಪಾಯಿಗಳಾಗಿದ್ದು, ಕಂಪೆನಿ ಮಹಾರಾಷ್ಟ್ರ ಸ್ಟೇಟ್ ಪವರ್ ಜನರೇಷನ್ ಕಂಪೆನಿಯಿಂದ 6897 ಕೋಟಿ ರೂಪಾಯಿ ಮೌಲ್ಯದ ತಲಾ 660 ಮೆಗಾ ವ್ಯಾಟ್ ಗಳ ಮೂರು ಟರ್ಬೈನ್ ಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆದಿದೆ.
ಕಂಪೆನಿ ಜೆಪಿ ಇಂಡಸ್ಟ್ರೀಸ್ಗೆ 4,000 ಕೋಟಿ ರುಪಾಯಿ ಮೌಲ್ಯದ ವಿದ್ಯುತ್ ಉಪಕರಣಗಳನ್ನೂ ಮಧ್ಯಪ್ರದೇಶದ ಪವರ್ ಜನರೇಷನ್ ಕಂಪೆನಿಗೆ 1635 ಕೋಟಿ ರೂಪಾಯಿಗಳ 1200 ಮೆಗಾ ವ್ಯಾಟ್ ಸಾಮರ್ಥ್ಯದ ಉತ್ಪಾದನಾ ಉಪಕರಣಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆದಿದೆ.
ಕಂಪೆನಿ 2012-13ಕ್ಕೆ ಉತ್ಪಾದನಾ ಸಾಮರ್ಥ್ಯವನ್ನು 6000 ಮೆಗಾ ವ್ಯಾಟ್ ಗಳಿಗೇರಿಸಲಿದ್ದು, ಈಗಿರುವ ಗುತ್ತಿಗೆಗಳನ್ನು 2014ರೊಳಗೆ ಸರಬರಾಜು ಮಾಡುವುದಾಗಿ ಉಪ್ಪಳ್ ತಿಳಿಸಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications