ಐಬಿಎಂ ಉದ್ಯೋಗಿ ಮನೆ ಕಳ್ಳತನ
ಬೆಂಗಳೂರು,
ಜು. 14 : ಮಹಿಡಿಯ ಮೇಲಿನ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ದಂಪತಿಯನ್ನು ಬೆದರಿಸಿ ಕೊಠಡಿಯೊದರಲ್ಲಿ ಕೂಡಿ ಹಾಕಿ ಸುಮಾರು ಎರಡು ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾದ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಮುತ್ತನಲ್ಲೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. id="toptextpromo">ಪರ್ಲ್
ಲೇಔಟ್ ನಲ್ಲಿ ವಾಸವಿರುವ ಐಬಿಎಂ ಕಂಪನಿ ಉದ್ಯೋಗಿ ಸುರೇಶ್ ಎಂಬುವವರ ಮನೆ ದರೋಡೆ ಮಾಡಲಾಗಿದೆ. ಮನಯೆ ಮಹಡಿಯ ಮೇಲೆ ಇರುವ ಬಾಗಿಲನ್ನು ರಾತ್ರಿ 1.30ಕ ಸುಮಾರಿಗೆ ಬಾಗಿಲು ಮುರಿದು ಐದು ಮಂದಿ ದುಷ್ಕರ್ಮಿಗಳು ಒಳ ನುಗ್ಗಿದ್ದಾರೆ. ಕೊಠಡಿಯಲ್ಲಿ ಮಲಗಿದ್ದ ಸುರೇಶ್ ಆತನ ಪತ್ನಿ ಬಾರ್ಗವಿ ಅವರನ್ನು ಬೆದರಿಸಿ ದಂಪತಿಗಳನ್ನು ಸ್ನಾನದ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೂಗಾಡಿದರೆ
ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ, ಅಲ್ಮೇರಾವನ್ನು ಒಡೆದು ಎರಡು ಸಾವಿರ ನಗದು, 70 ಗ್ರಾಂ ಚಿನ್ನಾಭರಣ, ಎರಡು ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ದುಷ್ಕರ್ಮಿಗಳು ಮುಖಕ್ಕೆ ಕರವಸ್ತ್ರ ಧರಿಸಿದ್ದರು. ಎಲ್ಲರೂ ತೆಲುಗು ಮಾತನಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುರೇಶ್ ಇಂದಿರಾನಗರದ ಸಿಎಂಎಚ್ ರಸ್ತೆಯ ಆಸ್ಟಿನ್ ನೆಟ್ ವರ್ಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾರ್ಗವಿ ಐಬಿಎಂ ಉದ್ಯೋಗಿಯಾಗಿದ್ದಾರೆ.











Click it and Unblock the Notifications