ಜರ್ಮನ್ನಿಗೆ ಕಂಚು, ಉರುಗ್ವೆ ದಿಟ್ಟ ಹೋರಾಟ

ನೆಲ್ಸನ್ ಮಂಡೇಲಾ ಬೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಜರ್ಮನಿಗೆ ಉತ್ತ್ತಮ ಪೈಪೋಟಿ ನೀಡಿದ ದಕ್ಷಿಣ ಅಮೆರಿಕಾದ ಏಕೈಕ ತಂಡ ಉರುಗ್ವೆ, ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಎರಡೂ ತಂಡಗಳು ಆಕ್ರಮಣಕಾರಿ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದವು. ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಹೆಚ್ಚು ಗೋಲುಗಳು ದಾಖಲಾಗುತ್ತದೆ ಎಂಬ ಇತಿಹಾಸ ಮತ್ತೆ ಮರುಕಳಿಸಿತು.
ಗಾಯಳು ಮಿರಸ್ಲೋವ್ ಕ್ಲೋಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಜರ್ಮನಿಗೆ ಯುವ ಆಟಗಾರ ಥಾಮಸ್ ಮುಲ್ಲರ್ 18 ನೇ ನಿಮಿಷದಲ್ಲಿ ಮೊದಲ ಯಶ ತಂದುಕೊಟ್ಟರು. ಅದ್ಭುತ ಆಟ ಪ್ರದರ್ಶನ ನೀಡಿದ ಮುಲ್ಲರ್ ಕೊನೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದರು.
ಆರು ಪಂದ್ಯಗಳಿಂದ ಐದು ಗೋಲು ಗಳಿಸಿ ಚಿನ್ನದ ಬೂಟಿಗೆ ಸ್ಪರ್ಧಿಯಾಗಿ ಕೂಡಾ ಮುಲ್ಲರ್ ನಿಂತಿದ್ದಾರೆ. ಅಲ್ಲದೆ, ಒಂದು ವೇಳೆ ಚಿನ್ನದ ಬೂಟೂ ಮಿಸ್ ಆದರೂ, ವಿಶ್ವಕಪ್ ನ ಯುವ ಆಟಗಾರ ಪ್ರಶಸ್ತಿಯಂತೂ 20ರ ಹರೆಯ ಮುಲ್ಲರ್ ಗೆ ಸಿಗುವುದು ಗ್ಯಾರಂಟಿ.
ಉರುಗ್ವೆ ಪರ ಎಡಿಸನ್ ಕವಾನಿ 28 ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು. ನಂತರ ಉರುಗ್ವೆಯ ಅದ್ಭುತ ಆಟಗಾರಡಿಯಗೋ ಫೊರ್ಲಾನ್ 51 ನೇ ನಿಮಿಷದಲ್ಲಿ ಬಲ ಬದಿಯಿಂದ ಬಂದ ಪಾಸ್ ಅನ್ನು ಬಲಗಾಲಿನಿಂದ ಒದ್ದು ಗೋಲುಗಳಿಸಿ ಮುನ್ನಡೆ ಒದಗಿಸಿದರು. ಈ ಮೂಲಕ ಫೊರ್ಲಾನ್ ಕೂಡಾ ಟೂರ್ನಿಯಲ್ಲಿ 5ಗೋಲು ಗಳಿಸಿದವರ ಪಟ್ಟಿಗೆ ಸೇರಿದರು.
ಆದರೆ, ಇದಾದ ಕೆಲವೇ ನಿಮಿಷದಲ್ಲಿ ಜರ್ಮನಿ ಸಮಬಲ ಮಾಡಿಕೊಂಡಿತು. 56 ನೇ ನಿಮಿಷದಲ್ಲಿ ಜಾಸನ್ ಗೋಲುಗಳಿಸಿ, ಪಂದ್ಯದ ರೋಚಕತೆ ಹೆಚ್ಚಿಸಿದರು. ಆದರೆ ಕೊನೆಗೆ ಖದಿರಾ 82 ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಹೊಡೆದು ಜರ್ಮನಿಗೆ ಮೂರನೇ ಸ್ಥಾನ ಖಚಿತಪಡಿಸಿದರು.
ಉರುಗ್ವೆ ಸಮಬಲ ಹೋರಾಟ: ಫುಸಿಲ್ ಹಾಗೂ ಸೊರೆಜ್ ತಂಡಕ್ಕೆ ಮರಳಿದ್ದರಿಂದ ಉತ್ತಮ ಹೋರಾಟ ನೀಡುವಲ್ಲಿ ಉರುಗ್ವೆ ಸಫಲವಾಯಿತು. ಕೊನೆ ಸೆಕೆಂಡ್ ವರೆಗೂ ಉರುಗ್ವೆ ಆಸೆ ಜೀವಂತವಾಗಿತ್ತು. ಹ್ಯಾಂಡ್ ಆಫ್ ಗಾಡ್ ಖ್ಯಾತಿಯ ಸೊರೆಜ್ ಜರ್ಮನಿಯ ಡಿ ಅಂಗಳದಲ್ಲಿ ಎಡವಿಬಿದ್ದು, ಫ್ರೀಕಿಕ್ ಪಡೆದರು. ಪಂದ್ಯಮುಗಿಯಲು ಕೇವಲ 20ಸೆಕೆಂಡುಗಳು ಮಾತ್ರ ಇತ್ತು.
ಉರುಗ್ವೆ ಪರ ಫೊರ್ಲಾನ್ ಅಂತಿಮ್ ಕಿಕ್ ತೆಗೆದುಕೊಂಡರೂ, ಗೋಲ್ ಪೋರ್ಸ್ ನ ಅಂಚಿಗೆ ತಾಕಿ ಹಾರಿ ಹೋದಾಗ, ಅಭಿಮಾನಿಗಳಿಗೆ ನಿರಾಶೆಯಾಯಿತು. ಆದರೆ, ಉರುಗ್ವೆ ಉತ್ತಮ ಪ್ರದರ್ಶನದೊಂದಿಗೆ ಎಲ್ಲರ ಮೆಚ್ಚಿಗೆ ಪಡೆಯಿತು. ಅಂದ ಹಾಗೆ, ಆಕ್ಟೋಪಸ್ ಸೂಚಿಸಿದ್ದಂತೆ ಜರ್ಮನಿ ಗೆಲುವು ಸಾಧಿಸಿದ್ದು,ಅಭಿಮಾನಿಗಳಿಗೆ ಖುಷಿ ತಂದಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications