ಇಂಥ ಭವಿಷ್ಯಗಳನ್ನು ನೀವು ನಂಬುತ್ತೀರಾ?

ಫೀಫಾ ವಿಶ್ವಕಪ್ 2010ನಲ್ಲಿ ಜರ್ಮನಿಯ ಎಲ್ಲ ಪಂದ್ಯಗಳ ಬಗ್ಗೆ ಕರಾರುವಾಕ್ಕಾಗಿ ಭವಿಷ್ಯ ನುಡಿದು ಜಗದ್ವಿಖ್ಯಾತವಾಗಿರುವ ಅಕ್ಟೋಪಸ್ ಪೌಲ್ ವಿಶ್ವಕಪ್ ಫೈನಲ್ ಪಂದ್ಯಾವಳಿಯ ಭವಿಷ್ಯ ನುಡಿಯುವುದೇ ಅನುಮಾನವಾಗಿತ್ತು. ಈ ಬಗ್ಗೆ ಕುತೂಹಲವನ್ನೂ ಕೆರಳಿಸಿತ್ತು. ಈಗ ಬಂದಿರುವ ವರದಿಗಳ ಪ್ರಕಾರ ಜುಲೈ 11ರಂದು ನೆದರ್ಲ್ಯಾಂಡ್ ಮತ್ತು ಸ್ಪೇನ್ ನಡುವೆ ನಡೆಯುತ್ತಿರುವ ಫೈನಲ್ ಪಂದ್ಯದ ಭವಿಷ್ಯವನ್ನೂ ಪೌಲ್ ನುಡಿದಿದೆ. ಸ್ಪೇನ್ ತಂಡ ವಿಶ್ವಕಪ್ ಎತ್ತಿ ಹಿಡಿಯಲಿದೆ ಎಂದು ಹೇಳಿ ಮತ್ತಷ್ಟು ಆಸಕ್ತಿ ಕೆರಳಿಸಿದೆ.
ಇದಕ್ಕೆ ವ್ಯತಿರಿಕ್ತವಾಗಿ ಮಲೇಷ್ಯಾದ ಗಿಳಿರಾಮ ಮಣಿ, ಮತ್ತೊಂದು 'ಸತ್ಯ' ನುಡಿದಿದ್ದು ನೆದರ್ಲ್ಯಾಂಡ್ ವಿಶ್ವಕಪ್ ಗೆಲ್ಲಲಿದೆ ಎಂದು ಹೇಳಿ ಅಕ್ಟೋಪಸ್ ಗೆ ಸವಾಲು ಹಾಕಿದೆ. ನಿಮ್ಮಿಬ್ಬರಿಗೆ ನಾನೇನು ಕಡಿಮೆ ಎಂಬಂತೆ ಆಸ್ಟ್ರೇಲಿಯಾದ ಹ್ಯಾರಿ ಎಂಬ ಹೆಸರಿನ ಮೊಸಳೆ ಸ್ಪೇನ್ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ.
ಪೌಲ್, ಮಣಿ, ಹ್ಯಾರಿ... ಮುಂದ? ಗಿಣಿ, ಕೋತಿ, ಕಪ್ಪೆ, ಆಮೆ, ಬೆಕ್ಕುಗಳು ಏಕೆ ಸುಮ್ಮನಿವೆ ಎಂಬುದೇ ಆಶ್ಚರ್ಯಕರ ಸಂಗತಿ. ಭಾರತದಲ್ಲಿ ಬೀದಿಬೀದಿಗಳಲ್ಲಿ ಗಿಳಿಶಾಸ್ತ್ರದವರು ಸಿಗುತ್ತಾರೆ. ಪ್ರಾಣಿ ಪಕ್ಷಗಳು ಹೋಗಲಿ, ಯಾರು ಪ್ರಧಾನಿಯಾಗ್ತಾರೆ, ಯಾರು ರಾಷ್ಟ್ರಪತಿಯಾಗ್ತಾರೆ, ಸೂರ್ಯಗ್ರಹಣವಾದಾಗ ಹಾಗಾಗುತ್ತೆ, ಚಂದ್ರಗ್ರಹಣ ಸಂಭವಿಸಿದಾಗ ಹೀಗಾಗುತ್ತೆ ಎಂಬು ಜ್ಯೋತಿಷ್ಯ ಹೇಳುವ ನಮ್ಮ ದೇಶದ ಜ್ಯೋತಿಷ್ಯಕಾರರು ಇನ್ನೂ ಏಕೆ ಬಾಯಿಬಿಟ್ಟಿಲ್ಲ? ಸದ್ಯಕ್ಕೆ ಇದು ಮಿಲಿಯನ್ ಡಾಲರ್ ಪ್ರಶ್ನೆ.
![]() | |
| ಪ್ರಾಣಿ, ಪಕ್ಷಿಗಳು ಭವಿಷ್ಯ ನುಡಿಯಲು ಸಾಧ್ಯವೆ? | |
![]() | |
ಇದೆಲ್ಲ ಜಾಗತಿಕ ಮೂಢನಂಬಿಕೆ ಅಲ್ಲದೆ ಮತ್ತೇನೂ ಅಲ್ಲ. ಜನ ಸಮೂಹ ಸನ್ನಿಯಂತೆ ಇಂಥ ನಂಬಿಕೆಗಳ ದಾಸರಾಗುತ್ತಿದ್ದಾರೆ. ಇಂಗ್ಲೆಂಡ್ ಆರಂಭಿಕ ಹಂತದಲ್ಲಿ ಸೋತಿದ್ದಕ್ಕೆ ಮಾಟ ಮಂತ್ರದ ಪಾರಿವಾಳವೇ ಕಾರಣ ಎಂದೂ ಸುದ್ದಿ ಹಬ್ಬಿಸಲಾಗಿತ್ತು. ಆ ಪಾರಿವಾಳ ಇಂಗ್ಲೆಂಡ್ ಫೆನೆಟಿಕ್ಸ್ ಗಳ ಕೈಗೆ ಸಿಕ್ಕಿದ್ದರೆ ಸುಮ್ಮನೆ ಬಿಡುತ್ತಿದ್ದರೆ?
ಮೂಢನಂಬಿಕೆಯ ದಾಸರಾಗಿರುವ ಜನ ಎಂಥ ಹೇಯ ಕೃತ್ಯಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಇಲ್ಲಿ ಒಂದು ಸತ್ಯಕಥೆಯಿದೆ ಓದಿರಿ. ಅಕಸ್ಮಾತಾಗಿ ಮನೆಯೊಳಗೆ ಬಂದ ಹಂದಿಯನ್ನು ಸಾಕ್ಷಾತ್ ಲಕ್ಷ್ಮಿಯ ಅವತಾರ ಎಂದು ನಂಬಿರುವ ಸಂಬಂಧಿಕರೊಬ್ಬರು ಅದನ್ನು ಹೊರಗೆ ಹೋಗಲು ಬಿಡದೆ ಮನೆಯ ಅಂಗಳದೊಳಗೇ ಅಟ್ಟಾಡಿಸಿಕೊಂಡು ಹೊಡೆದು ಸಾಯಿಸಿ ಅಂಗಳದಲ್ಲೇ ಮಣ್ಣು ಮಾಡಿದ್ದರು. ಅದನ್ನು ಹೊರಹೋಗಲು ಬಿಟ್ಟರೆ ಲಕ್ಷ್ಮಿ (ಕಾಂಚಾಣ) ತನ್ನ ಕೈಯಿಂದ ಎಲ್ಲಿ ತಪ್ಪಿ ಹೋಗುತ್ತದೋ ಎಂಬ ಭಯದಿಂದ ಒಂದು ಅಮಾಯಕ ಮೂಕ ಪ್ರಾಣಿ ಇವರ ದುರಾಸೆಗೆ ಬಲಿಯಾಗಬೇಕಾಯಿತು. ಇದೇ ರೀತಿ ಇಂಥ ಜನರ ಮೂಢನಂಬಿಕೆಗೆ, ದುರಾಸೆಗೆ ಇನ್ನೆಷ್ಟು ಪ್ರಾಣಿ, ಪಕ್ಷಿಗಳು ಬಲಿಯಾಗಿವೆಯೋ ಯಾರಿಗೆ ಗೊತ್ತು? ಹಣದ ಆಸೆಗೆ ಸ್ವಂತ ಮಕ್ಕಳನ್ನೇ ಬಲಿ ಕೊಡಲು ಹೇಸದ ಜನ ಇನ್ನು ಪ್ರಾಣಿಗಳನ್ನು ಬಿಟ್ಟಾರೆಯೆ?
ಈಗ ನೀವೇ ಹೇಳಿ, ಫುಟ್ಬಾಲ್ ಆಟ ಕೆಲ ಮನುಷ್ಯರಿಗೇ ಅರ್ಥವಾಗಲ್ಲ ಇನ್ನು ಈ ನಿರುಪದ್ರವಿಗಳಿಗೆ ಅರ್ಥವಾಗಲು ಸಾಧ್ಯವೆ? ಗೆಲುವು, ಸೋಲು ಕುರಿತು ಪ್ರಾಣಿ, ಪಕ್ಷಿಗಳು ಭವಿಷ್ಯ ನುಡಿಯಲು ಸಾಧ್ಯವೆ? ಇಂಥ ಭವಿಷ್ಯಗಳನ್ನು ನೀವು ನಂಬುತ್ತೀರಾ?
-
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral














Click it and Unblock the Notifications