ಬಿಎಸ್ಸೆನ್ನೆಲ್ ಗೆ 3 ಜಿ ಉಚಿತ ತರಂಗಾಂತರ?
ತರಂಗಾಂತರವನ್ನು ಹಂಚಿಕೆ ಮಾಡಿದಾಗ ಬಿಡ್ ನಂತರ ಯಶಸ್ವಿ ಬಿಡ್ ದಾರ ಕಂಪೆನಿ ಪಾವತಿಸುವ ಮೊತ್ತವನ್ನು ನೀಡಬೇಕೆಂದು ಷರತ್ತನ್ನು ವಿಧಿಸಲಾಗಿದ್ದ ಮೇರೆಗೆ ಕಳೆದ ವಾರವಷ್ಟೇ ಎರಡೂ ಸಂಸ್ಥೆಗಳು ಸರ್ಕಾರಕ್ಕೆ 29,598 ಕೋಟಿ ರೂಪಾಯಿಗಳನ್ನು ಪಾವತಿಸಿವೆ.
ನಂತರ ದೂರಸಂಪರ್ಕ ಸಚಿವ ಏ ರಾಜಾ ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಹಣಕಾಸು ಸಚಿವ ಪ್ರಣಬ್ ಮುಕರ್ಜಿ ಅವರಿಗೆ ಬರೆದಿರುವ ಪತ್ರದಲ್ಲಿ ಏ ರಾಜಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದು ಈ ಎರಡೂ ಸಂಸ್ಥೆಗಳು ಕೇವಲ ಲಾಭದ ದೃಷ್ಟಿಯಿಂದ ಕೆಲಸ ಮಾಡುತ್ತಿಲ್ಲ, ಬದಲಿಗೆ ರಾಷ್ಟ್ರಾದ್ಯಂತ ಗ್ರಾಮೀಣ ಭಾಗದ ಜನತೆಗೆ ಉತ್ತಮ ಸೌಲಭ್ಯವನ್ನು ಕಲ್ಪಿಸಿಕೊಡುತ್ತಿವೆ ಎಂದು ಹೇಳಿದ್ದಾರೆ.
ಈ ಪಾವತಿಯಿಂದ ಎರಡೂ ಸಂಸ್ಥೆಗಳಿಗೆ ತೀವ್ರ ಹಣಕಾಸಿನ ಹೊರೆ ಆಗಿದೆ ಎಂದೂ ಅವರು ಹೇಳಿದ್ದಾರೆ. ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಬಿಎಸ್ ಎನ್ ಎಲ್ ಅದ್ಯಕ್ಷ ಕುಲ್ ದೀಪ್ ಗೋಯಲ್ ಅವರು ನಾವು ನಮ್ಮ ಇಚ್ಚೆಯಂತೆ ಬೇಕಾದ ವ್ರತ್ತಗಳಲ್ಲಿ ಹರಾಜಿನಲ್ಲಿ ಪಾಲ್ಗೊಳ್ಳಲು ಆಗಿಲ್ಲ, ಬದಲಿಗೆ ಯಶಸ್ವಿ ಬಿಡ್ ದಾರ ನೀಡಿದ ಮೊತ್ತವನ್ನೇ ನೀಡಿರುವದರಿಂದ ತೀವ್ರ ಹೊರೆ ಆಗಿದೆ ಎಂದು ಹೇಳಿದ್ದಾರೆ.
ಇದೇ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಬಿಎಸ್ಎನ್ಎಲ್ ನಷ್ಟ ಅನುಭವಿಸಿದೆ ಎಂದೂ ಪತ್ರದಲ್ಲಿ ತಿಳಿಸಿದ್ದು , ಪಾವತಿಸಿದ 3ಜಿ ಸೇವಾ ಹಣವನ್ನು ಹಿಂತಿರುಗಿಸುವಂತೆ ಸರ್ಕಾರವನ್ನು ಕೋರಲಾಗಿದೆ. ಅಲ್ಲದೆ ಹೊಸ ಟೆಲಿಕಾಮ್ ನೀತಿ 1999 ರ ಪ್ರಕಾರ ಸೆಲ್ಯುಲಾರ್ ಮೊಬೈಲ್ ಪರವಾನಗಿ ಪಡೆಯಲು ಶುಲ್ಕ ವಿನಾಯ್ತಿ ನೀಡಲಾಗಿದ್ದು, 2ಜಿ ಸೇವೆಗೂ ನೀಡಬೇಕಾಗಿದ್ದ 1,650ಕೋಟಿ ರೂಪಾಯಿಗಳ ಶುಲ್ಕದಿಂದ ವಿನಾಯ್ತಿ ನೀಡಿರುವದನ್ನೂ ಎ.ರಾಜಾ ಪತ್ರದಲ್ಲಿ ತಿಳಿಸಿದ್ದಾರೆ.