ಭಾರತ್ ಬಂದ್ ಪರಿಣಾಮ 13 ಸಾವಿರ ಕೋಟಿ ನಷ್ಟ
ಭಾರತೀಯ ಕೈಗಾರಿಕೆಗಳ ಕಾನ್ಫಡರೇಷನ್ ಅನ್ವಯ ಸುಮಾರು 3 ಸಾವಿರ ಕೋಟಿ ನಷ್ಟ ಉಂಟಾಗಿದೆ. ಬಂದ್ ನಿಂಗದಾಗಿ ಮಹಾರಾಷ್ಟ್ರ, ನವದೆಹಲಿ ಹಾಗೂ ಕರ್ನಾಟಕ ಭಾರಿ ನಷ್ಟ ಅನುಭವಿಸಿದೆ. ರಸ್ತೆ, ರೈಲ್ವೆ ಹಾಗೂ ವಿಮಾನಯಾನ ಸಂಚಾರ ಸ್ಥಗಿತಕೊಂಡು ಪ್ರಯಾಣಿಕರು ಪರದಾಡುವಂತಾಗಿತ್ತು.
ಬೆಂಗಳೂರು ಮೂಲದ ಇನ್ಫೋಸಿಸ್ ಟೆಕ್ನಾಲಜೀಸ್ ಗೆ ಸುಮಾರು 50 ಕೋಟಿ ನಷ್ಟವಾಗಿದೆ ಎಂದು ಮಾನವ ಸಂಪನ್ಮೂಲ ಹಿರಿಯ ಅಧಿಕಾರಿ ಟಿವಿ ಮೋಹನ್ ದಾಸ್ ಪೈ ಹೇಳಿದ್ದಾರೆ. ಮತ್ತೊಂದು ದಿನ ಕೆಲಸ ಮಾಡಿ ನಷ್ಟವನ್ನು ಸರಿದೂಗಿಸಬೇಕಾಗಿದೆ ಎಂದರು.
ಸಾರಿಗೆ ನಿಗಮಕ್ಕೆ 12.5 ಕೋಟಿ ರು.ನಷ್ಟ
ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕೂ ವಿಭಾಗದ ಬಸ್ಗಳು ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ನಿಗಮಕ್ಕೆ 12.5 ಕೋಟಿ ರೂ.ನಷ್ಟವಾಗಿದೆ.
ಕೆಎಸ್ಆರ್ಟಿಸಿಗೆ 5 ಕೋಟಿ ರೂ., ಬಿಎಂಟಿಸಿಗೆ 2.5 ಕೋಟಿ ರೂ. ಎನ್ಇಕೆಆರ್ಟಿಸಿ ಹಾಗೂ ಎನ್ಡಬ್ಲ್ಯುಕೆಆರ್ಟಿಸಿಗೆ ತಲಾ 5 ಕೋಟಿ ರೂ. ನಷ್ಟವಾಗಿದೆ.
ಬೆಳಗ್ಗೆ ಬಿಎಂಟಿಸಿಯ ಸುಮಾರು 68 ಬಸ್ಗಳಿಗೆ ಜೆ.ಪಿ. ನಗರ, ಮಲ್ಲೇಶ್ವರ, ಕೆ.ಆರ್.ಪುರ, ಪ್ರೇಜರ್ಟೌನ್, ಯಶವಂತಪುರ, ಯಲಹಂಕ, ಸುಬ್ರಹ್ಮಣ್ಯಪುರ, ಪೀಣ್ಯ, ನಾಗರಬಾವಿ ಹಾಗೂ ತಿಲಕ್ನಗರದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಬಸ್ ಜಖಂಗೊಂಡು ಸಂಸ್ಥೆಗೆ 7 ಲಕ್ಷ ರೂ. ನಷ್ಟ ಸಂಭವಿಸಿದೆ.