ಹೀಗೂ ಉಂಟೆ: ಜರ್ಮನ್ ಗೆಲುವು ಆಕ್ಟೋಪಸ್ ಭವಿಷ್ಯ
ಒಬೆರ್ಸೆನ್, ಜು.4: ವಿಶ್ವಕಪ್ 2010ರಲ್ಲಿ ಜರ್ಮನಿಯ ಎಲ್ಲಾ ಪಂದ್ಯಗಳ ಭವಿಷ್ಯವನ್ನು ಪಂದ್ಯಕ್ಕೆ ಮೊದಲೇ ಪೌಲ್ ಎಂಬ ಹೆಸರಿನ ಆಕ್ಟೋಪಸ್ ಸೂಚಿಸುತ್ತಿದೆ. ಅಚ್ಚರಿ ಎಂದರೆ ಇದುವರೆಗಿನ ಎಲ್ಲಾ ಐದು ಪಂದ್ಯಗಳಲ್ಲಿ ಆಕ್ಟೋಪಸ್ ಭವಿಷ್ಯ ನಿಜವಾಗಿದೆ.
ಕೆಲವರು ಇದು ಅದೃಷ್ಟ ಎಂದರೆ, ಇನ್ನೂ ಕೆಲವರು ಮಂತ್ರಮುಗ್ಧರಾಗಿ ಮೌನಕ್ಕೆ ಶರಣಾಗಿದ್ದಾರೆ. ಒಂದಷ್ಟು ಜನ ಭವಿಷ್ಯ ಹೇಳುವವರು, ಜ್ಯೋತಿಷಿಗಳು ಹೊಟ್ಟೆ ಉರಿಯೊಂದಿಗೆ ಒದ್ದಾಡುತ್ತಿದ್ದಾರೆ. ಅಷ್ಟಪಾದಗಳ್ಳುಳ್ಳ ಜೀವಿಯೊಂದು ಜರ್ಮನಿನ ಸೋಲು ಗೆಲುವಿನ ಸ್ಪಷ್ಟ ಚಿತ್ರಣ ನೀಡುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿ.
ಭವಿಷ್ಯ ಹೇಳುವ ಪರಿ:ಕಪ್ಪೆಚಿಪ್ಪಿನ ಆಹಾರ ಹೊಂದಿರುವ ಎರಡು ಡಬ್ಬಿಗಳನ್ನು ಆಕ್ಟೋಪಸ್ ನ ಮುಂದಿರಿಸಲಾಗುತ್ತದೆ. ಈ ಡಬ್ಬಿಗೆ ಜರ್ಮನ್ ಹಾಗೂ ಎದುರಾಳಿ ತಂಡದ ಬಾವುಟವನ್ನು ಹೊದೆಸಿರಲಾಗುತ್ತದೆ. ಪೌಲ್ ಇರುವ ನೀರಿನ ಜಾಡಿಯಲ್ಲಿ ಈ ಎರಡು ಡಬ್ಬಿಯನ್ನು ಇಳಿಬಿಡಲಾಗುತ್ತದೆ. ಯಾವ ಡಬ್ಬಿಯಲ್ಲಿನ ಆಹಾರವನ್ನು ಪೌಲ್ ಸೇವಿಸುತ್ತಾನೋ ಆ ತಂಡ ವಿಜಯಿಯಾಗುತ್ತದೆ ಎಂದು ತಿಳಿಯಲಾಗುತ್ತದೆ.
ಮೊದಮೊದಲು ಇದರ ಬಗ್ಗೆ ಜನತೆಗೆ ಕುತೂಹಲವಿದ್ದರೂ ನಂಬಿಕೆ ಇರಲಿಲ್ಲ. ಸೆರ್ಬಿಯಾ ವಿರುದ್ಧ ಜರ್ಮನಿ ಸೋಲುತ್ತದೆ ಎಂದು ಪೌಲ್ ಸೂಚಿಸಿದಾಗ ಅಣಕಿಸಿ ನಕ್ಕವರೇ ಹೆಚ್ಚು. ಆದರೆ, ಜರ್ಮನಿಯ ಐದೂ ಪಂದ್ಯಗಳ ಫಲಿತಾಂಶಗಳನ್ನು ಸರಿಯಾಗಿ ಸೂಚಿಸಿ ಪೌಲ್ ಸವಾಲೆಸೆದಿದ್ದಾನೆ.
ಯಾರು ಈ ಪೌಲ್ : ಇಂಗ್ಲೆಂಡ್ ನಲ್ಲಿ ಹುಟ್ಟಿದ ಈ ಆಕ್ಟೋಪಸ್ , ಜರ್ಮನಿನ ಸೀ ಲೈಫ್ ಅಕ್ವೇರಿಯಂನಲ್ಲಿ ಜೀವಿಸುತ್ತಿದ್ದಾನೆ. ಅಲ್ಲಿನ ಆತನ ಪಾಲಕರಿಗೆ ಪೌಲ್ ಭವಿಷ್ಯ ಹೇಳುವ ಐಡಿಯಾ ಹೊಳೆಯಿತು ಎಂಬುದು ಇನ್ನೂ ತಿಳಿದಿಲ್ಲ. ಅರ್ಜೆಂಟೀನಾ ವಿರುದ್ಧ ಜರ್ಮನಿನ ವಿಜಯ ಎಂದು ಸೂಚಿಸಿದ್ದ ಪೌಲ್ ಈಗ ಜಗತ್ತಿನಾದ್ಯಂತ ಬಹುಬೇಡಿಕೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications